ಸಿಡಿ ಲೇಡಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಸಲಹೆಯೇನು ಗೊತ್ತೇ ?

Prasthutha|

►ಸಿದ್ದರಾಮಯ್ಯರ ಮೇಲಿನ ಗೌರವ ಕಡಿಮೆಯಾಯಿತೆಂದ ರಮೇಶ್ ಜಾರಕಿಹೊಳಿ !

- Advertisement -

ರಮೇಶ್ ಜಾರಕಿಹೊಳಿಯ ಸಿಡಿಗೆ ಸಂಬಂಧಪಟ್ಟಂತೆ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ತ ಯುವತಿಗೆ ಮಾಜಿ ಮುಖ್ಯಮಂತ್ರಿ ಸಿಧ್ಧರಾಮಯ್ಯ ಮಹತ್ವದ ಸಲಹೆ ನೀಡಿದ್ದು, ಎಲ್ಲೊಂದರಲ್ಲಿ ನಿಂತು ವಿಡೀಯೋ ಮಾಡುವುದಕ್ಕಿಂತ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿ ಎಂದು ಹೇಳಿದ್ದಾರೆ.

 ಒಟ್ಟು ಮೂರು ವಿಡೀಯೋಗಳನ್ನು ಸಾಮಾಜಿಕ ಜಾಲತಾಣದ್ಯಾಂತ ಹಂಚಿಕೊಂಡಿರುವ ಸಂತ್ರಸ್ತ ಯುವತಿ ಗುರುವಾರ ಬಿಡುಗಡೆಗೊಳಿಸಿದ್ದ ಎರಡನೇ ವಿಡೀಯೋದಲ್ಲಿ ಸಿದ್ದರಾಮಯ್ಯರನ್ನು ಉಲ್ಲೇಖಿಸಿ ತನ್ನ ಹೆತ್ತವರಿಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಆಕೆಗೂ ಆಕೆಯ ಹೆತ್ತವರಿಗೂ ಸೂಕ್ತ ರಕ್ಷಣೆ ನೀಡುವಂತೆಯೂ ಸರಕಾರವನ್ನು ಒತ್ತಾಯಿಸಿದ್ದಾರೆ.

- Advertisement -

  ಇನ್ನು ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕೆಂದು ಸಿದ್ದರಾಮಯ್ಯರ ಹೇಳಿಕೆಯ ವಿರುದ್ದ ಅಸಮಾಧಾನ ಹೊರಹಾಕಿದ್ದ ರಮೇಶ್ ಜಾರಕಿಹೊಳಿ, ಈ ಹೇಳಿಕೆಯಿಂದ ಸಿದ್ದರಾಮಯ್ಯರ ಮೇಲಿದ್ದ ಗೌರವ ಕಡಿಮೆಯಾಯಿತು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ನಾನು ಸತ್ಯ ನುಡಿದಿದ್ದರಿಂದ ಅವರ ಗೌರವ ಕಡಿಮೆಯಾದರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿಯೇ ಪ್ರತಿಕ್ರಿಯಿಸಿದ್ದಾರೆ.

Join Whatsapp