BSY ಬದಲಾವಣೆ ಮೊದಲೇ ಹೇಳಿದ್ದೆ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಾರೆ ಎಂಬುದಾಗಿ ನಾನು ಮೊದಲೇ ಹೇಳಿದ್ದೆ, ಆಗ ಯಾರು ನಂಬಿರಲಿಲ್ಲ. ಈಗ ಆ ಕಾಲ ಸನ್ನಿತವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಬದಲಾವಣೆಯಿಂದ ಕಾಂಗ್ರೆಸ್ ಗೆ ಪ್ಲಸ್ ಮೈನಸ್ ಮುಖ್ಯ ಅಲ್ಲ.ಆದರೆ, ಒಬ್ಬ ಭ್ರಷ್ಟ ಮುಖ್ಯಮಂತ್ರಿ ಹೋಗುತ್ತಿದ್ದಾರೆ ಎನ್ನುವುದು ಮುಖ್ಯ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬದಲಾವಣೆಯಿಂದ ಅವಧಿಗೂ ಮುನ್ನ ಚುನಾವಣೆ ಬರಲಿದೆ ಅಂತ ನನಗೆ ಅನಿಸಲ್ಲ. ಒಂದು ವೇಳೆ ಚುನಾವಣೆ ಬಂದರೆ, ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಯಾವ ಸಮಯದಲ್ಲಿ ಚುನಾವಣೆ ಬಂದರೂ ಕಾಂಗ್ರೆಸ್ ಎದುರಿಸಲು ಸನ್ನದ್ದವಾಗಿದೆ ಎಂದು ಹೇಳಿದರು.

- Advertisement -

ತಮ್ಮ ದೆಹಲಿ ಭೇಟಿ ಕುರಿತು ತಿಳಿಸಿದ ಅವರು, ಹೈ ಕಮಾಂಡ್​ ಯಾವ ಕಾರಣಕ್ಕೆ ಬರಲು ಹೇಳಿದೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು. ಅದರ ಬಗ್ಗೆ ತಮಗೂ ಗೊತ್ತಿಲ್ಲ. ನಮ್ಮ ವರಿಷ್ಠ ರಾಹುಲ್ ಗಾಂಧಿ ಕರೆದಿದ್ದಾರೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದರು.

Join Whatsapp