ಕ್ಷಮೆಯಾಚಿಸದಿದ್ದರೆ ಅನಂತ್‌ಕುಮಾರ್‌ಗೆ ಚಪ್ಪಲಿ ಸೇವೆ: ಎಸ್.ರಾಮಪ್ಪ

Prasthutha|

ಹರಿಹರ: 13 ಬಾರಿ ರಾಜ್ಯದ ಬಜೆಟ್‌ ಮಂಡಿಸಿದ, ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರ ಸಾರ್ವಜನಿಕ ಬದುಕಿನಷ್ಟು ವಯಸ್ಸು ಕಾಣದ ಅನಂತ ಕುಮಾರ್ ಹೆಗಡೆ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಅವರು ಆಡಿರುವ ಸಂವಿಧಾನ ವಿರೋಧಿ ಮಾತುಗಳಿಗೆ ತಕ್ಷಣವೇ ನಾಡಿನ ಜನರ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಅವರನ್ನು ಹುಡುಕಿಕೊಂಡು ಹೋಗಿ ಚಪ್ಪಲಿ ಸೇವೆ ಮಾಡಲಾಗುವುದು ಎಂದು ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ವಿರೋಧಿ ಹೇಳಿಕೆ ಮೂಲಕ ನಾಡಿನ ವಿವಿಧ, ಜಾತಿ, ಧರ್ಮೀಯರ ನಡುವೆ ಸಂಘರ್ಷ ಸೃಷ್ಟಿಸುತ್ತಿರುವ ಹೆಗಡೆಯನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಶಂಕರ್ ಖಟಾವ್‌ಕರ್, ರೇವಣಸಿದ್ದಪ್ಪ, ಮುಖಂಡರಾದ ಬಿ.ಮೊಹಮ್ಮದ್‌ ಫೈರೋಜ್, ಸುರೇಶ್ ಹಾದಿಮನಿ, ಟಿ.ಜೆ.ಮುರುಗೇಶಪ್ಪ, ಬಾಲಾಜಿ, ಹನಗವಾಡಿ ಹನುಮಂತಪ್ಪ, ನಗರಸಭೆ ಮಾಜಿ ಸದಸ್ಯ ಹಂಚಿನ ನಾಗಣ್ಣ, ವೀರಣ್ಣ ಇದ್ದರು.

Join Whatsapp