500 ಕೋಟಿ ರೂಪಾಯಿಗೂ ಹೆಚ್ಚು ವಂಚನೆ: ಮೋಸ್ಟ್ ವಾಂಟೆಡ್ ಅರೋಪಿ ಶಿವಾನಂದ ಕುಂಬಾರ ಬಂಧನ

Prasthutha|

ಬೆಳಗಾವಿ: ಕರ್ನಾಟಕ , ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಮಹಾವಂಚಕ ಶಿವಾನಂದ ಕುಂಬಾರ ಬೆಳಗಾವಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

- Advertisement -

ನೇಪಾಳದಲ್ಲಿ ಅಡಗಿದ್ದ ವಂಚಕ ಮುಂಬೈನಲ್ಲಿ ಸೆರೆ ಆಗಿದ್ದಾನೆ. ಈತ ಸಾಮಾನ್ಯ ವಂಚಕನಲ್ಲ. ಎರಡು ರಾಜ್ಯದಲ್ಲಿ ಸಿಮೆಂಟ್ , ಸ್ಟೀಲ್ ದಂಧೆಯಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು 500 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದನು ಎನ್ನಲಾಗಿದೆ.

ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿದ ವಂಚಕ ನೇಪಾಳದಲ್ಲಿದ್ದು, ನೇಪಾಳ ಪೊಲೀಸರನ್ನು ಇಂಟರ್ ಪೋಲ್, ಧೂತಾವಾಸ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು, ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ಶಿವಾನಂದ ಕುಂಬಾರನನ್ನು ಬಂಧಿಸಿದ್ದಾರೆ.

- Advertisement -

ಶಿವಾನಂದ ಕುಂಬಾರ ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿ, ಕೆಲಸ ವರ್ಷಗಳ ಹಿಂದೆ ಮಹಾರಾಷ್ಟ್ರದ ಇಚಲಕರಂಜಿ ಎಂಬಲ್ಲಿ ಶಿವಾನಂದ ಕುಂಬಾರ ವಾಸವಿದ್ದ. ಸಿಮೆಂಟ್, ಸ್ಟೀಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದ ಶಿವಾನಂದ ಕುಂಬಾರ, ಜನರನ್ನು ಪುಸಲಾಯಿಸಿ ಕೋಟ್ಯಂತರ ಹಣ ಪಡೆದಿದ್ದ ಎನ್ನಲಾಗಿದೆ.

ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರಿಗೆ ನಂಬಿಸಿದ್ದ ಶಿವಾನಂದ್ ಕುಂಬಾರ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಉದ್ಯಮಿಗಳ ಬಳಿ 500 ಕೋಟಿಗೂ ಹೆಚ್ಚು ಹಣ ಪಡೆದಿದ್ದನು. ಬಳಿಕ ಕುಟುಂಬ ಸಮೇತ ಪರಾರಿಯಾಗಿದ್ದನು.

ಈತನಲ್ಲಿ ಹಣ ಹೂಡಿಕೆ ಮಾಡಿದ್ದ ಬೆಳಗಾವಿಯ ಹಲವರು ಬೀದಿಗೆ ಬಂದಿದ್ದಾರೆ. ವೋಲ್ ಸೇಲ್ ತರಕಾರಿ ವ್ಯಾಪಾರಸ್ಥ ಯಲ್ಲಪ್ಪ ಮನಗುತಕರ್ ಎಂಬುವನ ಮೂಲಕ ಹೂಡಿಕೆ ಮಾಡಿಸುತ್ತಿದ್ದನು. ಬಹುತೇಕ ವೋಲ್ ಸೇಲ್ ತರಕಾರಿ ವ್ಯಾಪಾರಸ್ಥರಿಂದ ಕೋಟ್ಯಂತರ ಹಣ ಪಡೆದಿದ್ದನು. ಯಲ್ಲಪ್ಪ ಮನಗುತಕರ್ ಗೆ 75 ಲಕ್ಷ ಹಣ ನೀಡಿದ್ದ ಜಾಫರವಾಡಿಯ ಅರ್ಜುನ್ ಪಾಟೀಲ್, ಹಣ ವಾಪಸ್ ನೀಡದಿದ್ದಾಗ ಬೆಳಗಾವಿ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಬೆಳಗಾವಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಪರಾಧ ವಿಭಾಗದ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ತನಿಖೆ ನಡೆದಿತ್ತು.

ಮಹಾರಾಷ್ಟ್ರದ ಕೋಪರಗಾಂವದಲ್ಲಿ ಆಶ್ರಮವೊಂದರಲ್ಲಿ ಕಾರು ಚಾಲಕನಾಗಿದ್ದ ವಂಚಕ ಕುಂಬಾರ 2009ರಿಂದಲೇ ವಂಚನೆಯನ್ನು ಆರಂಭಿಸಿದ್ದನು. ಎರಡು ರಜ್ಯಗಳಲ್ಲೂ ವಂಚನೆ ಮಾಡುತ್ತಿದ್ದ ವಂಚಕ ಮಾರುಕಟ್ಟೆಯಲ್ಲಿ ಇರೋ ದರಕ್ಕಿಂತ ಕಡಿಮೆ ದರಕ್ಕೆ ಸಿಮೆಂಟ್, ಸ್ಟೀಲ್ ಜನರಿಗೆ ಕೊಡಿಸುತ್ತಿದ್ದ. ನಂಬಿಕೆ ಗಳಿಸಲು ತಾನೇ ವ್ಯತ್ಯಾಸದ ಹಣವನ್ನು ಹಾಕುತ್ತಿದ್ದನು.

ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ವಂಚಕ ಮುಂಬೈನಲ್ಲಿ ಸೆರೆ ಆಗಿದ್ದಾನೆ. ನೇಪಾಳ ಪೊಲೀಸರನ್ನು ಇಂಟರ್ಪೋಲ್, ಧೂತಾವಾಸ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು, ಈ ವೇಳೆ ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಬಂಧಿಸಿದ್ದಾರೆ. ಬೆಳಗಾವಿ ಸಿಸಿಬಿ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ್ & ಟೀಮ್ ಮಹಾ ವಂಚಕ ಶಿವಾನಂದ ಕುಂಬಾರನನ್ನು ಬಂಧಿಸಿದೆ. ಮಹಾರಾಷ್ಟ್ರ ಪೊಲೀಸರಿಗೆ ಸಾಧ್ಯವಾಗದ ಕೆಲಸವನ್ನು ರಾಜ್ಯದ ಪೊಲೀಸರು ಮಾಡಿದ್ದಾರೆ.

Join Whatsapp