ಶಿವಮೊಗ್ಗ: ಸರ ಎಗರಿಸಿ ಪರಾರಿಯಾಗಲು ಯತ್ನ; ಆರೋಪಿಗಳು ಸೆರೆ

Prasthutha|

ತೀರ್ಥಹಳ್ಳಿ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹಾದಿಗಲ್ಲು ಸಮೀಪ ನಡೆದಿದೆ.

- Advertisement -

ಹಾದಿಗಲ್ಲು ಗ್ರಾಪಂ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ದಾಪುರದ ಲಕ್ಷ್ಮಣ್  ಅವರ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿ ಕುತ್ತಿಗೆಯಲ್ಲಿದ್ದ ಸರ ಕಸಿದು ಪರಾರಿಯಾಗಲು ಯತ್ನಿಸಿದ ವೇಳೆ ಓರ್ವ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕಾರಿನಲ್ಲಿ ಬಂದಿದ್ದ ಇಬ್ಬರು ಯುವಕರು ಈ ಭಾಗದಲ್ಲಿ ಜೆಸಿಬಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಮಹಿಳೆಯು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಯುವಕರು, ಆಕೆಯೊಂದಿಗೆ  ಕುಡಿಯಲು ನೀರು ಕೇಳಿದ್ದರು. ನೀರು ತರುತ್ತಿದ್ದಂತೆ ಒಬ್ಬ ಆಕೆಯ ಕುತ್ತಿಗೆಗೆ ಕೈ ಹಾಕಿ ಸರ ಎಳೆದಿದ್ದಾನೆ. ಇನ್ನೊಬ್ಬ ಎಸ್ಕೇಪ್ ಆಗಲು ಕಾರಿನಲ್ಲಿ ಕುಳಿತಿದ್ದ. ಅಷ್ಟೊತ್ತಿಗೆ ಆಕೆ ಕಿರುಚಿದ್ದರಿಂದ ಅಕ್ಕಪಕ್ಕದವರು  ಓಡಿ ಬಂದಿದ್ದಾರೆ. ಇದನ್ನ ಗಮನಿಸಿದ ಆರೋಪಿ ಅಲ್ಲಿಂದ ಓಡಿಹೋಗಿದ್ಧಾನೆ. ಆದರೆ ಕಾರಿನಲ್ಲಿದ್ದ ಯುವಕ ಓಡಲಾಗದೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಗೃಹ ಸಚಿವರ ಕ್ಷೇತ್ರದಲ್ಲಿ ಇಂತಹ ಘಟನೆಗಳು ದಿನದಿಂದ ದಿನಕ್ಕೆ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಭಯ ಹುಟ್ಟಿಸಿದೆ.




Join Whatsapp