‘ಕೃಷಿ ಕಾನೂನುಗಳ ನಿಜವಾದ ವಾಸ್ತುಶಿಲ್ಪಿ ಶಿರೋಮಣಿ ಅಕಾಲಿ ದಳ’: ನವಜೋತ್ ಸಿಂಗ್ ಸಿಧು

Prasthutha|

ಅಮೃತಸರ: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ನಿಜವಾದ ವಾಸ್ತುಶಿಲ್ಪಿ ಶಿರೋಮಣಿ ಅಕಾಲಿದಳ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

- Advertisement -

ಹೊಸ ಕೃಷಿ ಕಾನೂನುಗಳು 2013 ರಲ್ಲಿ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಅಕಾಲಿದಳ-ಬಿಜೆಪಿ ಸರ್ಕಾರ ಪಂಜಾಬ್ ವಿಧಾನಸಭೆಯಲ್ಲಿ ಮಾಡಿದ ಒಪ್ಪಂದದ ಮುಂದುವರಿದ ಭಾಗ ಎಂದು ಅವರು ಪ್ರತಿಪಾದಿಸಿದರು.

ಬಾದಲ್ ಪರಿಚಯಿಸಿದ ಕಾನೂನುಗಳ ಮೂಲ ಫೋಟೋಸ್ಟಾಟ್ ಆವೃತ್ತಿಯಾಗಿದೆ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳು ಎಂದು ಹೇಳಿದ ಅವರು, ಪ್ರಕಾಶ್ ಸಿಂಗ್ ಬಾದಲ್, ಸುಖ್ಬೀರ್ ಸಿಂಗ್ ಬಾದಲ್ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಅವರು ಮೊದಲು ಕೃಷಿ ಕಾನೂನುಗಳನ್ನು ಬೆಂಬಲಿಸಿ ನಂತರ ಟೀಕಿಸಿದ ವೀಡಿಯೋವನ್ನು ಬಿಡುಗಡೆ ಮಾಡಿದರು.

Join Whatsapp