ಹದೆಗೆಟ್ಟ ಹೆದ್ದಾರಿ: ನಾಲ್ಕು ತಿಂಗಳು ಶಿರಾಡಿ ರಸ್ತೆ ಬಂದ್ ?

Prasthutha|

ಶಿರಾಡಿ: ಬೆಂಗಳೂರು – ಮಂಗಳೂರು ಸಂಪರ್ಕಿಸುವ ಶಿರಾಡಿ ರಸ್ತೆ ಮುಂದಿನ ನಾಲ್ಕು ತಿಂಗಳು ಬಂದ್ ಆಗುವ ಸಾಧ್ಯತೆಗಳಿವೆ. ತೀರಾ ಹದೆಗಟ್ಟಿರುವ ಹೆದ್ದಾರಿಯನ್ನು ದುರಸ್ತಿಪಡಿಸಲು ನಾಲ್ಕು ತಿಂಗಳು ಶಿರಾಡಿ ರಸ್ತೆಯನ್ನು ಬಂದ್ ಮಾಡುವಂತೆ ಗುತ್ತಿಗೆದಾರರು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ. ಇದೀಗಾಗಲೇ ಟೆಂಡರ್ ವಹಿಸಿರುವ ಗುತ್ತಿಗೆದಾರರು ರಸ್ತೆ ದುರಸ್ತಿ ಪಡೆಸಲು ಕನಿಷ್ಠ ನಾಲ್ಕು ತಿಂಗಳ ಸಮಯಾವಕಾಶ ಕೇಳಿಕೊಂಡಿದ್ದಾರೆ.

- Advertisement -


ಶಿರಾಡಿಯಿಂದ ಸಕಲೇಶಪುರಕ್ಕೆ ತೆರಳುವ ಹೆದ್ದಾರಿ ಸಂಪೂರ್ಣವಾಗಿ ಹದೆಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ರಸ್ತೆ ದುರಸ್ತಿಗಾಗಿ ನಾಲ್ಕು ತಿಂಗಳು ಶಿರಾಡಿ ರಸ್ತೆಯನ್ನು ಬಂದ್ ಮಾಡುವಂತೆ ಸಭೆಯಲ್ಲಿ ಗುತ್ತಿಗೆದಾರರು ಉಭಯ ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ. ಜಿಲ್ಲಾಡಳಿತವು ನಾಲ್ಕು ತಿಂಗಳು ರಸ್ತೆ ಬಂದ್ ಮಾಡಲು ಅವಕಾಶ ನೀಡಿದರಷ್ಟೆ ಕಾಮಗಾರಿ ನಡೆಸುತ್ತೇವೆ ಎಂದು ಹೇಳಿದ್ದಾರೆ.


ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಹೆದ್ದಾರಿ ಯೋಜನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ದುರಸ್ತಿ ವೇಳೆ ರಸ್ತೆಯನ್ನು ಬಂದ್ ಮಾಡುವುದು ಅನಿವಾರ್ಯವೇ ಎಂಬುವುದರ ಕುರಿತು ಸರ್ವೆ ನಡೆಸಿ ವರದಿ ನೀಡುವಂತೆ ಉಭಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಗುತ್ತಿಗೆದಾರರ ರಸ್ತೆ ಬಂದ್ ಪ್ರಸ್ತಾವನೆಗೆ ದ.ಕ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಈ ಬಗ್ಗೆ ಶೀಘ್ರವೇ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ , ಹೆದ್ದಾರಿ ಪ್ರಾಧಿಕಾರ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಜತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಶೀಘ್ರವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

Join Whatsapp