ಶಿವಮೊಗ್ಗ: ಸಮಾಜದ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ‘ಸಮಾನ ಮನಸ್ಕರ ವೇದಿಕೆ’ ಆಗ್ರಹ

Prasthutha|

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಶಾಂತಿ- ಸೌಹಾರ್ದತೆ ಕದಡುವ ಘಟನೆಗಳನ್ನು ಹತ್ತಿಕ್ಕಲು ಜಿಲ್ಲಾಡಳಿತ ನಿಷ್ಪಕ್ಷ  ಕ್ರಮ ಕೈಗೊಳ್ಳಬೇಕೆಂದು ನಗರ ಸಮಾನ ಮನಸ್ಕರ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

- Advertisement -

ಸಮಾಜಮುಖಿ ಸಮಾನ ಮನಸ್ಕ  ವಕೀಲ ಶ್ರೀಪಾಲ್ , ರೈತ ಸಂಘದ  ಹೆಚ್. ಆರ್ ಬಸವರಾಜಪ್ಪ, ಪತ್ರಕರ್ತರಾದ ಟೆಲೆಕ್ಸ್ ರವಿಕುಮಾರ್, ಆರ್ ಎಸ್ ಹಾಲಸ್ವಾಮಿ ಎನ್. ಮಂಜುನಾಥ್  DSS ನ ಗುರು ಮೂರ್ತಿ, ಸಾಮಾಜಿಕ‌ ಕಾರ್ಯಕರ್ತರಾದ ಸುರೇಶ್ ಅರಸಾಳು , ಚಟ್ನಳ್ಳಿ ನಾಗರಾಜ್, ಹರಿಗೆ ರವಿ  ಮುಂತಾದವರು   ಜಿಲ್ಲಾಧಿಕಾರಿ ಡಾ. ಸೆಲ್ವಮಣಿ  ಅವರನ್ನು ಭೇಟಿ ಮಾಡಿ ನಗರದಲ್ಲಿಇತ್ತೀಚೆಗೆ ನಡೆದ ಶಾಂತಿ ಕದಡಿದ ಘಟನೆಗಳ ಕುರಿತು ಸಮಾಲೋಚನೆ ನಡೆಸಿದರು.

 ಇತ್ತೀಚಿನ‌ ದಿನಗಳಲ್ಲಿ ರಾಜಕೀಯ ಕುಮ್ಮಕ್ಕಿನಿಂದ  ಮತೀಯ ಸಂಘಟನೆಗಳು ಸೌಹಾರ್ದತೆ ಕದಡುವ ಕೃತ್ಯಗಳನ್ನು ನಡೆಸುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲೂ ಅಹಿತಕರ ಘಟನೆಗಳು ನಡೆಯುವ ಆತಂಕ ಇದೆ. ಅಧಿಕಾರದಲ್ಲಿರುವವರೇ ಪ್ರಚೋದನಾಕಾರಿ‌ ಹೇಳಿಕೆಗಳನ್ನು ನೀಡುತ್ತಿದ್ದು, ಇಂತಹ‌ ಹೇಳಿಕೆ ನೀಡುವವರು ಯಾರೇ ಆಗಿದ್ದರೂ ನಿಷ್ಪಕ್ಷವಾಗಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ  ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

- Advertisement -

ಆಗ್ಗಾಗ್ಗೆ ನಡೆಯುತ್ತಿರುವ ಕೋಮು ಸೌಹಾರ್ದ ಕದಡುವ ಘಟನೆಗಳಿಂದಾಗಿ   ಶಿವಮೊಗ್ಗ ನಗರದ ನಾಗರಿಕ ರು ಆತಂಕ ದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನದ ದುಡಿಮೆಯನ್ನು   ನಂಬಿರುವ ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು  ಅಸಹನೀಯ ವಾಗುತ್ತಿದೆ ಎಂದು ಹೇಳಿದರು.

ಶಾಲಾ ಕಾಲೇಜುಗಳ ಮಕ್ಕಳ ಪೋಷಕರ ಆತಂಕ ಹೆಚ್ಚಾಗುತ್ತಿದ್ದು, ನಗರದ ಎಲ್ಲೆಡೆ ಬೇಕಾಬಿಟ್ಟಿ  ಫ್ಲೆಕ್ಸ್ ಹಾಕುವುದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಜೊತೆಗೆ ಈ ಎಲ್ಲಾ ಕಾರಣಗಳಿಂದ ಶಿವಮೊಗ್ಗ ನಗರದ ಆರ್ಥಿಕತೆ ಕುಂಟಿತಗೊಳ್ಳುತ್ತಿದೆ ಎಂಬ  ವಿಚಾರವಾಗಿ ಜಿಲ್ಲಾಧಿಕಾರಿಗಳೊಂದಿಗೆ  ಚರ್ಚೆ ನಡೆಸಿದರು.

ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಂಚುವುದು, ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶಾಂತಿ ಕದಡುವ ಮನಸ್ಥಿತಿಯುಳ್ಳ ವ್ಯಕ್ತಿ ಗಳನ್ನು ಹದ್ದುಬಸ್ತಿನಲ್ಲಿಟ್ಟು,  ನಗರದ ಪರಿಸರ ಮತ್ತು ಶಾಂತಿ ಯನ್ನು ಕಾಪಾಡುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ಈ ಎಲ್ಲಾ ಸಂಘಟನೆಗಳು ಸದಾ ಜಿಲ್ಲಾಡಳಿತ ದೊಂದಿಗೆ ಇರುವುದಾಗಿ  ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಪ್ರಮುಖರು ಹೇಳಿದರು.

ಈ ಎಲ್ಲಾ ಅಭಿಪ್ರಾಯಗಳನ್ನು ಆಲಿಸಿದ   ಜಿಲ್ಲಾಧಿಕಾರಿಗಳು    ಈ ನಿಟ್ಟಿನಲ್ಲಿ ಕ್ರಮ ಕೈಗೂಳ್ಳುವದಾಗಿ ಭರವಸೆ ನೀಡಿದರು.

Join Whatsapp