ಸಿಎಂರನ್ನು ಟಿಪ್ಪು ದಾಸಿ ಪುತ್ರ ಎಂದು ಎಡಿಟ್ ಫೋಟೋಗಳ ಹಂಚಿಕೆ: ಪ್ರಕರಣ ದಾಖಲು

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟಿಪ್ಪು ಸುಲ್ತಾನ್ ಫೋಟೋವನ್ನು ಅಸಹ್ಯಕರವಾದ ರೀತಿಯಲ್ಲಿ ಎಡಿಟ್ ಮಾಡಿ ಹರಿಯಬಿಡಲಾಗಿದ್ದು, ಸಿಎಂನ್ನು ಟಿಪ್ಪು ಸುಲ್ತಾನ್ ದತ್ತುಪುತ್ರ, ದಾಸಿ ಪುತ್ರ ಎಂದು ಬರೆದು ಫೋಟೋ ಎಡಿಟ್ ಮಾಡಿ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ತರಲಾಗಿದೆ.

- Advertisement -

ಈ ಸಂಬಂಧ ಸಾಕ್ಷಿ ಸಮೇತ ಶಶಾಂಕ್ ಗೌಡ ದೂರು ನೀಡಿದ್ದಾರೆ. ಸದ್ಯ ಎಫ್ ಬಿಯಲ್ಲಿರುವಂತಹ ಇಂತಹ ಪೋಸ್ಟ್ ಗಳನ್ನೂ ಕೂಡ ಪೊಲೀಸರು ಡಿಲೀಟ್ ಮಾಡಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಎಂರನ್ನು ನಿಂದನೆ ಮಾಡಿದ್ದಲ್ಲದೆ, ಎಡಿಟ್ ಫೋಟೋಗಳನ್ನು ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ ಎಂಬ ಹೆಸರಿನ ಫೇಸ್ ಬುಕ್ ಪೇಜ್‌ನಿಂದಲೇ ಬಿಡುಗಡೆಗೊಳಿಸಲಾಗಿದೆ. ಮಗನಿಂದಲೇ ಅಪ್ಪನ‌ ನಿಂದನೆ ಎಂಬಂತೆ ಬಿಂಬಿಸುವ ಮೂಲಕ ವಿಕೃತಿ ಮೆರೆಯಲಾಗಿದೆ.

- Advertisement -

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಹನುಮಂತರಾಯಪ್ಪ ಹಾಗೂ ಸಂಸದ ಡಿಕೆ ಸುರೇಶ್ ಅವರ ಫೋಟೋ ಹಾಕಿ ವೈಯುಕ್ತಿಕವಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿ ಬಿಡಲಾಗಿದೆ.

Join Whatsapp