ಶಾರುಕ್ ಪುತ್ರನಿಗೆ ಜಾಮೀನಿಲ್ಲ; ವಿಚಾರಣೆ ನಾಳೆಗೆ ಮುಂದೂಡಿಕೆ

Prasthutha|

ಮುಂಬೈ: ಡ್ರಗ್ಸ್‌ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ನಟ ಶಾರೂಖ್ ಪುತ್ರ ಆರ್ಯನ್‌‌ ಖಾನ್‌ಗೆ ಇಂದೂ ಜಾಮೀನು ಸಿಗಲಿಲ್ಲ. ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗ ಮುಂದೂಡಿದೆ. ನ್ಯಾಯಾಲಯದ ಮುಂದೆ ಸರ್ಕಾರಿ ಪರ ವಕೀಲ ಎಎಸ್‌ಜಿ ಅನಿಲ್ ಸಿಂಗ್ ಜಾಮೀನು ವಿರುದ್ಧವಾಗಿ ನಲವಾಗಿ ವಾದಿಸಿದರು.

- Advertisement -

ಆರ್ಯನ್ ಖಾನ್ ಮಾದಕ ದ್ರವ್ಯಕ್ಕಾಗಿ ವಿದೇಶದಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಪುರಾವೆಗಳಿವೆ ಅಂತ ವಾದಿಸಿದ ಅವರು, ಯಾವುದೇ ಆರೋಪಿಯನ್ನು ಬಿಡುಗಡೆ ಮಾಡಿದರೆ, ಸಾಕ್ಷಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಅಂತ ಪ್ರತಿಪಾದಿಸಿದ್ದಾರೆ.

ನ್ಯಾಯಾಪೀಠ, ಆರ್ಯನ್ ಖಾನ್ ಮತ್ತು ಇತರ ಆರೋಪಿಗಳ ಜಾಮೀನು ವಿಚಾರಣೆಯನ್ನು ನಾಳೆ ಮಧ್ಯಾಹ್ನ 12 ಗಂಟೆಗೆ ಮುಂದೂಡಿತು ಎಂದು ಮುಂಬೈ ಕೋರ್ಟ್ ಮಾಹಿತಿ ನೀಡಿದೆ.

Join Whatsapp