ಲೈಂಗಿಕ ದೌರ್ಜನ್ಯ ಪ್ರಕರಣ: ಕೊನೆಗೂ ಕೊಚ್ಚಿಗೆ ಆಗಮಿಸಿದ ನಟ ವಿಜಯ್ ಬಾಬು

Prasthutha|

ಕೊಚ್ಚಿ : ಅತ್ಯಾಚಾರ ಪ್ರಕರಣದಲ್ಲಿ ಮಧ್ಯಂತರ ಬಂಧನದ ಪೂರ್ವ ಜಾಮೀನು ಪಡೆದಿರುವ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ಅವರು ಬುಧವಾರ ದುಬೈನಿಂದ ಕೇರಳದ ಕೊಚ್ಚಿಗೆ ಆಗಮಿಸಿದ್ದಾರೆ.

- Advertisement -

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ವಿಜಯ್, “ಇವತ್ತು ಬರುತ್ತೇನೆ ಎಂದು ಕೋರ್ಟ್‌ ನಲ್ಲಿ ಹೇಳಿದ್ದೆ. ಹಾಗಾಗಿ ನಾನು ಬಂದಿದ್ದೇನೆ. ಗೌರವಾನ್ವಿತ ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಪೊಲೀಸರಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಸತ್ಯ ಹೊರಬರುತ್ತದೆ. ನನ್ನೊಂದಿಗೆ ನಿಂತ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು ”ಎಂದು ಅವರು ಹೇಳಿದರು.

ಕೇರಳ ಹೈಕೋರ್ಟ್ ಮಂಗಳವಾರ ವಿಜಯ್‌ ಗೆ ಮುಂದಿನ ವಿಚಾರಣೆಯ ದಿನಾಂಕ – ಜೂನ್ 2 ರವರೆಗೆ ಮಧ್ಯಂತರ ಪೂರ್ವ ಬಂಧನ ಜಾಮೀನು ನೀಡಿತ್ತು. ಇಂದು ವಿಚಾರಣೆಯ ಭಾಗವಾಗಿ ವಿಜಯ್ ಪೊಲೀಸರ ಮುಂದೆ ಹಾಜರಾಗಬಹುದು.

Join Whatsapp