ಜಾತ್ಯಾತೀತ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಮಾಡುವುದು ಆದಿ ಉಡುಪಿ ಬೆತ್ತಲೆ ಪ್ರಕರಣದಂತೆ ಸುಲಭವಲ್ಲ: ಯಶ್ಪಾಲ್ ಸುವರ್ಣಗೆ SDPI

Prasthutha|

ಉಡುಪಿ: ಸದಾ ವಿವಾದಾತ್ಮಕ ಹೇಳಿಕೆಗಳಲ್ಲಿ ಸುದ್ದಿಯಾಗುವ ಯಶ್ಪಾಲ್ ಸುವರ್ಣ ಇಂದು ಉಡುಪಿ ಹಿಜಾಬ್ ಹೋರಾಟಗಾರ್ತಿಗಳ ವಿರುದ್ಧ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದರು. ಅಲ್ಲದೇ SDPI ಪಕ್ಷದ ವಿರುದ್ಧವೂ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ SDPI ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ ಯಶ್ಪಾಲ್ ಸುವರ್ಣ ಪ್ರಚಾರದ ತೆವಲಿಗೆ SDPI ಬಗ್ಗೆ ಬಾಲಿಷ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದ್ದಾರೆ.

- Advertisement -

ಜಾತ್ಯಾತೀತ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಆದಿ ಉಡುಪಿ ಬೆತ್ತಲೆ ಪ್ರಕರಣ ನಡೆಸಿದಂತೆ ಸುಲಭ ಅಲ್ಲ ಎಂಬುದನ್ನು ಯಶ್ಪಾಲ್ ಸುವರ್ಣ ಅರಿಯಬೇಕು. ಅಲ್ಲದೇ  ಬಾರತವನ್ನು ಹಿಂದೂ ರಾಷ್ಟ್ರ ಮಾಡುವುದೇ ನಮ್ಮ ಗುರಿ ಎಂಬ ತಿರುಕನ ಕನಸನ್ನು ನೀವು ಬಿಡಬೇಕು  ಎಂದಿದ್ದಾರೆ.

 ಬಿಜೆಪಿಯ ಸ್ಥಳೀಯ ನಾಯಕ ಯಶ್ಪಾಲ್ ಸುವರ್ಣ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು SDPI ಬಗ್ಗೆ ಈ ರೀತಿಯ ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ  ಯಶ್ಪಾಲ್ ಸುವರ್ಣ ರಿಗೆ ಟಿಕೆಟ್ ದೊರಕುವುದು ಅನುಮಾನ ಎಂದು ಕಾತರಿಯಾದ ಹಿನ್ನೆಲೆಯಲ್ಲಿ SDPI ವಿರುದ್ದ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಶಾಹಿದ್ ಅಲಿ ಆರೋಪಿಸಿದ್ದಾರೆ.

Join Whatsapp