ಕರ್ನಾಟಕ ಬಂದ್ | SDPI ಉಳ್ಳಾಲ ನಗರ ಸಮಿತಿ ಸಂಪೂರ್ಣ ಬೆಂಬಲ

Prasthutha|

ಉಳ್ಳಾಲ: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನ ತೀರ್ಪು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಕರ್ನಾಟಕದ ಮುಸ್ಲಿಮ್ ಧಾರ್ಮಿಕ ಪರಮೊಚ್ಚ ನೇತಾರ ಅಮೀರೇ ಶರಿಯತ್ ಮೌಲಾನ ಸಗೀರ್ ಅಹಮದ್ ರಶಾದಿ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದು ಈ ಬಂದ್ ಗೆ ಬೆಂಬಲ ನೀಡುವುದಾಗಿ SDPI ಉಳ್ಳಾಲ ನಗರ ಸಮಿತಿಯ ಮುಖಂಡರಾದ ಅಬ್ಬಾಸ್ ಎ.ಆರ್ ತಿಳಿಸಿದ್ದಾರೆ.

- Advertisement -

ಕ್ಷೇತ್ರದ ಎಲ್ಲಾ ವರ್ತಕರು ಈ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಈ ಬಂದ್ ಯಶಸ್ವಿಗೊಳಿಸಬೇಕಾಗಿಯೂ ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಸದಸ್ಯ ಸುಹೈಲ್ ಉಳ್ಳಾಲ್, ನಗರ ಸಮಿತಿ ಉಪಾಧ್ಯಕ್ಷ ಇಮ್ತಿಯಾಝ್ ಕೋಟೇಪುರ, ಪ್ರಮುಖರಾದ ಶರೀಫ್ ಕಲ್ಲಾಪು ಉಪಸ್ಥಿತರಿದ್ದರು.

Join Whatsapp