ಮಂಗಳೂರು: ಪ್ರವಾದಿ ನಿಂದನೆಗೈದವನ ಬಂಧನಕ್ಕೆ ಎಸ್ ಡಿಪಿಐ ಒತ್ತಾಯ

Prasthutha|

ಮಂಗಳೂರು; ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಅಶ್ಲೀಲ ಪದಗಳಿಂದ‌ ನಿಂದಿಸಿ‌ ಕೋಟ್ಯಂತರ ಜನರ‌ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಜಗದೀಶ ಐವರ್ನಾಡುವಿನ ಮೇಲೆ ಜಿಲ್ಲಾ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ ಒತ್ತಾಯಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರವಾದಿವರ್ಯರ ವಿರುದ್ಧ ಜಗದೀಶ ಐವರ್ನಾಡು ಎಂಬಾತ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಜಿಲ್ಲಾ ಪೊಲೀಸರು ಕೂಡಲೇ ಸುಮಟೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಬೇಕು. ಸಮಾಜದ ಶಾಂತಿಯನ್ನು ಕದಡಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಮೃದು ಧೋರಣೆ ತಾಳದೆ ಕಠಿಣ ಕಾನೂನು ಕ್ರಮ ಕೈಗೊಂಡು ಅಶಾಂತಿಯನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp