SDPI ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದಾನ ಮಾಸಾಚರಣೆ

Prasthutha|

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಫೆಬ್ರವರಿ 22 ರಿಂದ ಮಾರ್ಚ್ 20 ರ ವರೆಗೆ ಪಕ್ಷದ ಗ್ರಾಮ ಸಮಿತಿ, ನಗರ ಸಮಿತಿ, ಬ್ಳಾಕ್ ಸಮಿತಿಗಳ ಆಯೋಜನೆಯಲ್ಲಿ ರಕ್ತ ಕೊಟ್ಟು-ಬಾಂಧವ್ಯ ಕಟ್ಟು ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ರಕ್ತದಾನ ಶಿಬಿರದ ಮಾಸಾಚರಣೆ ನಡೆಯಲಿದೆ.

- Advertisement -


ರಕ್ತದಾನ ಶಿಬಿರದೊಂದಿಗೆ ರಕ್ತದಾನದ ಅನಿವಾರ್ಯತೆ ಮತ್ತು ಮಹತ್ವವನ್ನು ಸಮಾಜಕ್ಕೆ ತಿಳಿಸುವ ಕಾರ್ಯಕ್ರಮ ನಡೆಯಲಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ನಾಗರೀಕರು ಜಾತಿ, ಮತ, ಪಕ್ಷ ಭೇದ ಮರೆತು ಕೈಜೋಡಿಸಬೇಕೆಂದು ಕಾರ್ಯಕ್ರಮದ ಸಂಯೋಜಕರು SDPI ಜಿಲ್ಲಾ ಕಾರ್ಯದರ್ಶಿಯೂ ಆದ ಸುಹೈಲ್ ಖಾನ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



Join Whatsapp