ತುರಿಕೆ ಪುಡಿ ಎರಚಿದ ಅಪರಿಚಿತ: ಸಾರ್ವಜನಿಕ ಸಭೆಯಲ್ಲೇ ಬಟ್ಟೆ ಬಿಚ್ಚಿದ ಬಿಜೆಪಿ ಸಚಿವ

Prasthutha|

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರಿಗೆ ಸಾರ್ವಜನಿಕ ಸಭೆಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತುರಿಕೆ ಪುಡಿ ಎರಚಿದ ಕಾರಣ ಅವರು ಉರಿ ತಡೆಯಲಾರದೆ ಸಭೆಯಲ್ಲೇ ಬಟ್ಟೆ ತೆಗೆದು ಮೈ ತೊಳೆದ ಘಟನೆ ನಡೆದಿದೆ.

- Advertisement -

ಮಧ್ಯಪ್ರದೇಶದ ಮುಂಗೋಲಿ ಗ್ರಾಮದ ಮೂಲಕ ಬಿಜೆಪಿ ವಿಕಾಸ್ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ. ಸಾರ್ವಜನಿಕ ಸಭೆಯೊಂದರಲ್ಲಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ತುರಿಕೆ ಪುಡಿ ಎರಚಿದ್ದು, ನಂತರ ಉರಿ ತಡೆಯಲಾರದೆ ಸಭೆಯಲ್ಲೇ ಬಟ್ಟೆ ತೆಗೆದು ಬಾಟಲಿ ನೀರಿನಿಂದ ಕೈ, ಮೈ ತೊಳೆದುಕೊಳ್ಳುತ್ತಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಡಾಡುತ್ತಿದೆ.

ವಿಕಾಸ ರಥವು ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಎರಡು ದಿನಗಳ ಹಿಂದೆ ಸಾಗುತ್ತಿದ್ದಾಗ ಕೆಟ್ಟುಹೋದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಆ ಸಮಯದಲ್ಲಿ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮಾ ಮತ್ತು ಗ್ರಾಮದ ಮಾಜಿ ಸರಪಂಚ್ ನಡುವೆ ಮಾತಿನ ಚಕಮಕಿ ನಡೆದಿತ್ತು.

- Advertisement -

‘ನಾವು ಕಾಂಗ್ರೆಸ್ಸಿಗರನ್ನು ಕೆಟ್ಟವರೆಂದುಕೊಂಡಿದ್ದೆವು. ಆದರೆ, ನೀವು (ಬಿಜೆಪಿಗರು) ಕಾಂಗ್ರೆಸ್’ಗಿಂತ ಕೆಟ್ಟವರು, ನಮಗೆ ಸರಿಯಾದ ರಸ್ತೆ ಸೌಲಭ್ಯ ಕಲ್ಪಿಸುವಲ್ಲಿ ನೀವು ವಿಫಲರಾಗಿದ್ದೀರಿ. ನಾವು ನಿಮಗೆ ಮತ ಹಾಕುವುದಿಲ್ಲ’ ಎಂದು ಸ್ಥಳೀಯರು ಘೋಷಣೆ ಕೂಗಿದ್ದಾರೆ. ಈ ಪ್ರದೇಶದಲ್ಲಿ ಸರ್ಕಾರ 3 ಕಿ.ಮೀ ರಸ್ತೆಯನ್ನು ಮಂಜೂರು ಮಾಡಿಲ್ಲ ಎಂದೂ ತರಾಟೆಗೆ ತೆಗೆದುಕೊಂಡಿದ್ದರು.

Join Whatsapp