ಇಂದಿರಾ ಗಾಂಧಿ ಹಂತಕ ಪುತ್ರ ಸರಬ್ಜಿತ್ ಸಿಂಗ್ ಪಂಜಾಬ್‌ನ ಫರಿದ್ಕೋಟ್ ಕ್ಷೇತ್ರದಿಂದ ಸ್ಪರ್ಧೆ

Prasthutha|

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕನೋರ್ವನ ಪುತ್ರ ಸರಬ್ಜಿತ್ ಸಿಂಗ್ (45) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಫರಿದ್ಕೋಟ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸರಬ್ಜಿತ್ ಸಿಂಗ್ ಇಂದಿರಾ ಗಾಂಧಿ ಹಂತಕರಲ್ಲಿ ಒಬ್ಬನಾದ ಬಿಯಾಂತ್ ಸಿಂಗ್ ಪುತ್ರ.

- Advertisement -

1984ರ ಅಕ್ಟೋಬರ್ 31ರಂದು ಸತ್ವಂತ್ ಸಿಂಗ್ ಜೊತೆಗೂಡಿ ಬಿಯಾಂತ್ ಸಿಂಗ್ ಇಂದಿರಾ ಗಾಂಧಿಯವರನ್ನು ಗುಂಡಿಕ್ಕಿ ಕೊಂದಿದ್ದನು.

- Advertisement -

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಹಮ್ಮದ್ ಸಾದಿಕ್ ಈ ಸ್ಥಾನವನ್ನು ಗೆದ್ದಿದ್ದರು. 2014ರಲ್ಲಿ ಶಿರೋಮಣಿ ಅಕಾಲಿ ದಳ, 2009ರಲ್ಲಿ ಪರಮ್ಜಿತ್ ಕೌರ್ ಗುಲ್ಶನ್ ಶಿರೋಮಣಿ ಅಕಾಲಿ ದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ 2004ರಲ್ಲಿ ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್ ಬಾದಲ್ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿದ್ದರು.

2004 ರಲ್ಲಿ ಬಟಿಂಡಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 1.13 ಲಕ್ಷ ಮತಗಳನ್ನು ಪಡೆದು ಸೋತಿದ್ದ ಸರಬ್ಜಿತ್ ಸಿಂಗ್ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು



Join Whatsapp