‘ಪ್ರಸ್ತುತ ಭಾರತದಲ್ಲಿ ಗಟ್ಟಿಯಾಗಿ ಉಚ್ಚರಿಸಲು ನಾನು ಬಯಸುವ ಪದ ಅಲ್ಲಾಹು ಅಕ್ಬರ್’: ಸಾರಾ ಜೋಸೆಫ್

Prasthutha|

- Advertisement -

ತಿರುವನಂತಪುರ: ಹಿಜಾಬ್ ವಿರುದ್ಧ ಪ್ರತಿಭಟಿಸಿದ ಕೇಸರಿಧಾರಿಗಳ ಮುಂದೆ ದಿಟ್ಟತನವನ್ನು ಪ್ರದರ್ಶಿಸಿದ ಮಂಡ್ಯದ ವಿದ್ಯಾರ್ಥಿನಿಯ ಧೈರ್ಯವನ್ನು ಕೊಂಡಾಡಿದ ಕೇರಳದ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸಾರಾ ಜೋಸೆಫ್, “ಅಲ್ಲಾಹು ಅಕ್ಬರ್ ಎಂಬ ಪದವನ್ನು ಪ್ರಸ್ತುತ ಭಾರತದಲ್ಲಿ ಗಟ್ಟಿಯಾಗಿ ಉಚ್ಚರಿಸಲು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ. 

 “ಅಲ್ಲಾ ಅಕ್ಬರ್ ಎಂಬುದು ಪ್ರಸ್ತುತ ಭಯಗ್ರಸ್ತ ಭಾರತದಲ್ಲಿ ಗಟ್ಟಿಯಾಗಿ ಹೇಳಲು ಬಯಸುವ ಎರಡು ಪದಗಳು” ಎಂದು ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

- Advertisement -

ಕೇಸರಿಧಾರಿಗಳು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯನ್ನು ತಡೆಯಲು ಯತ್ನಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಾಗ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿರುವ ವೀಡಿಯೋ ವ್ಯಾಪಕ ವೈರಲಾಗಿತ್ತು.  

Join Whatsapp