JDSಗೆ ಗುಡ್ ಬೈ ಹೇಳಿದ ಸಂದೇಶ್ ನಾಗರಾಜ್: ಮೂರು ದಿನಗಳಲ್ಲಿ BJP ಸೇರ್ಪಡೆ

Prasthutha|

ಮೈಸೂರು: ಜೆಡಿಎಸ್ ತೊರೆದು ಮೂರು ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಘೋಷಿಸಿದ್ದಾರೆ.

- Advertisement -


ಈ ಕುರಿತು ಮಾತನಾಡಿರುವ ಅವರು, ಮೂರು ದಿನಗಳಲ್ಲಿ ಜೆಡಿಎಸ್ ಗೆ ರಾಜೀನಾಮೆ ನೀಡುತ್ತೇನೆ. ನಂತರ ಬಿಜೆಪಿ ಸೇರುತ್ತೇನೆ. ಬಳಿಕ ಜೆಡಿಎಸ್ ಪಕ್ಷ ಬಿಡಲು ಕಾರಣ ಏನು ಎಂದು ಸುದ್ದಿಗೋಷ್ಠಿ ಮಾಡಿ ತಿಳಿಸುತ್ತೇನೆ ಎಂದು ಅವರು ಹೇಳಿದರು.


ನನ್ನ ಅಗತ್ಯ ಎಚ್.ಡಿ ಕುಮಾರಸ್ವಾಮಿ ಅವರಿಗೆ ಇದ್ದಂತಿಲ್ಲ. ಅಗತ್ಯವಿಲ್ಲದ ಕಡೆ ನಾನು ಏಕೆ ಇರಬೇಕು?. ಕೇವಲ ದೈಹಿಕವಾಗಿ ಮಾತ್ರ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ. 3 ವರ್ಷಗಳಿಂದ ನಾನು ಜೆಡಿಎಸ್ ನಾಯಕರ ಸಂರ್ಪಕದಲ್ಲಿಲ್ಲ. ವಿಧಾನ ಪರಿಷತ್ ಒಳಗೂ ನಾನು ಬಿಜೆಪಿ ಪರವೇ ಬಿಲ್ ಗಳಿಗೆ ಕೈ ಎತ್ತಿದ್ದೇನೆ. ನನಗೆ ಬಿಜೆಪಿಯಿಂದ ಪರಿಷತ್ ಟಿಕೆಟ್ ಸಿಗುವ ವಿಶ್ವಾಸವಿದೆ. ಎಂದು ತಿಳಿಸಿದ್ದಾರೆ.

Join Whatsapp