ಕನ್ನಡ ಯುವ ನಟನ ಬರ್ಬರ ಹತ್ಯೆ

Prasthutha|

ಬೆಂಗಳೂರು: ಮಂಡ್ಯ ಮೂಲದ ಸ್ಯಾಂಡಲ್ ವುಡ್ ಯುವ ನಟನನ್ನು ಚಾಕುನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪಟ್ಟಣಗೆರೆಯಲ್ಲಿ ನಡೆದಿದೆ.
ಸತೀಶ್ ವಜ್ರ ಕೊಲೆಯಾದ ಯುವ ನಟ ಎಂದು ಗುರುತಿಸಲಾಗಿದೆ.
ಸತೀಶ್ ವಜ್ರ ಇತ್ತೀಚೆಗೆ ‘ಲಗೋರಿ’ ಎಂಬ ಕಿರುಚಿತ್ರದ ಮೂಲಕ ಜನರ ಗಮನ ಸೆಳೆದಿದ್ದರು. ಇದಕ್ಕೂ ಮುನ್ನ ‘ಕ್ರಶ್’ ಕಿರುಚಿತ್ರಕ್ಕೂ ಬಣ್ಣಹಚ್ಚಿದ್ದರು.
ಸತೀಶ್ ಅವರು ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆ ಆಗಿದ್ದರು. ಕೆಲ ತಿಂಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸತೀಶ್ ಬರ್ಬರವಾಗಿ ಕೊಲೆಯಾಗಿದ್ದು, ಇವರ ಪತ್ನಿಯ ಸಹೋದರ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆರ್.ಆರ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Join Whatsapp