ಆರೆಸ್ಸೆಸ್ಸ್ ವಿರುದ್ಧ ಬರಹ| ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Prasthutha|

ಹೊಸದಿಲ್ಲಿ: ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕ ವಿವಾದವಾಗುತ್ತಿದ್ದಂತೆಯೇ ಅವರ ಮನೆ ಮೇಲೆ ದಾಳಿ ನಡೆದಿದೆ. ನೈನಿತಾಲ್‌ನಲ್ಲಿರುವ ಖುರ್ಷಿದ್ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಖುರ್ಷಿದ್ ಹಂಚಿಕೊಂಡಿದ್ದಾರೆ.

- Advertisement -

“ನನಗೆ ಈ ಎಚ್ಚರಿಕೆ ನೀಡಿದ ನನ್ನ ಸ್ನೇಹಿತರಿಗೆ ನನ್ನ ಬಾಗಿಲು ತೆರೆಯಲು ನಾನು ಆಶಿಸಿದ್ದೆ. ಇದು ಹಿಂದೂ ಧರ್ಮ ಎಂದು ನೀವು ಇನ್ನೂ ಹೇಳಬಹುದೇ?” ಎಂಬ ಶೀರ್ಷಿಕೆಯೊಂದಿಗೆ ದಾಳಿಗೊಳಗಾದ ಮನೆಯ ದೃಶ್ಯಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮನೆಯ ಕಿಟಕಿ ಒಡೆದು ಮುಂಬಾಗಿಲನ್ನು ಸುಟ್ಟು ಹಾಕಿರುವ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅವರು ಹಂಚಿಕೊಂಡಿದ್ದಾರೆ.
ಖುರ್ಷಿದ್ ಶೇರ್ ಮಾಡಿರುವ ಒಂದು ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಧ್ವಜವನ್ನು ಬೀಸುತ್ತಾ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದನ್ನು ಕಾಣಬಹುದು.

- Advertisement -

ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕ ಸನ್ ರೈಸ್ ಓವರ್ ದಿ ನೇಷನ್ ಹುಡ್ ಇನ್ ಅವರ್ ಟೈಮ್ಸ್ ನಲ್ಲಿ ಆರೆಸ್ಸೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.



Join Whatsapp