ಠಾಣೆಗಳಲ್ಲಿ ಮುಂದುವರಿದ ಚಿತ್ರಹಿಂಸೆ: ಸಿಸಿಟಿವಿ ಅಳವಡಿಕೆಗೆ ಹೆಚ್ಚಿದ ಸಾರ್ವಜನಿಕರ ಆಗ್ರಹ

Prasthutha|

ನವದೆಹಲಿ: ಪೊಲೀಸ್ ಠಾಣೆಯಲ್ಲಿನ ಹಿಂಸಾಚಾರದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಮಧ್ಯೆ ಉತ್ತರ ಪ್ರದೇಶದಲ್ಲಿ ಅಲ್ತಾಫ್ ಎಂಬ ಯುವಕನ ಕಸ್ಟಡಿ ಸಾವಿನ ಕುರಿತು ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.

- Advertisement -

ಅಲ್ತಾಫ್ ಎಂಬಾತನನ್ನು ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಠಾಣೆಗೆ ಕರೆಯಿಸಿದ್ದು, ನಂತರದ ಬೆಳವಣಿಗೆಯೊಂದರಲ್ಲಿ ವಾಶ್ ರೂಂ ನಲ್ಲಿ ಸಣ್ಣ ನೀರಿನ ನಲ್ಲಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಅಲ್ತಾಫ್ ನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಕುಟುಂಬ, ಇದು ಪೊಲೀಸರು ನಡೆಸಿದ ವ್ಯವಸ್ಥಿತ ಕೊಲೆಯೆಂದು ಆರೋಪಿಸಿತ್ತು. ಮಾತ್ರವಲ್ಲ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿತ್ತು.

- Advertisement -

ಈ ಮಧ್ಯೆ ದೇಶದೆಲ್ಲೆಡೆ ನಿರಂತರ ಪೊಲೀಸ್ ಹಿಂಸಾಚಾರ ವೃದ್ಧಿಸುತ್ತಿದ್ದು, ಈ ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಮ್ ಕೋರ್ಟ್, ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡುವ ಕುರಿತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Join Whatsapp