ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ : RSS ಮುಖ್ಯಸ್ಥ ಮೋಹನ್ ಭಾಗವತ್

Prasthutha|

ನವದೆಹಲಿ : ಪ್ರತಿದಿನ ಹಲವು ಮಸೀದಿಗಳ ಬಗ್ಗೆ ಸಂಘರ್ಷ ಎಬ್ಬಿಸುತ್ತಿರುವ ಕಾರ್ಯಕರ್ತರಿಗೆ ನೀವು ಪ್ರತಿದಿನ ಹೊಸಹೊಸ ವಿವಾದಗಳನ್ನು ಹುಟ್ಟುಹಾಕಲು ಹೋಗಬೇಡಿ, ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

- Advertisement -

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎನ್ನಲಾಗುವ ಆಕೃತಿ ಪತ್ತೆಯಾಗಿದ್ದು
ಹಿಂದೂ ಮುಸ್ಲಿಮರ ನಡುವೆ ವೈಮನಸ್ಸು ಹುಟ್ಟುಹಾಕಿದೆ. ಇದೇ ರೀತಿ ಹಲವೆಡೆ ಸಂಘದ ಕಾರ್ಯಕರ್ತರು ಸಂಘರ್ಷ ಹುಟ್ಟುಹಾಕುತ್ತಿದ್ದು ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ.

ಜ್ಞಾನವಾಪಿ ವಿವಾದವನ್ನು ಅಯೋದ್ಯೆ ವಿವಾದವಾಗಿಸಬೇಕು ಎಂಬ ಕಟ್ಟರ್ ಹಿಂದುತ್ವಾವಾದಿಗಳ ಆಸೆಗೆ ಸ್ವತ ಭಾಗವತ್ ತಣ್ಣೀರೆರಚಿದ್ದು ಹೊಸ ತಿರುವನ್ನು ಹುಟ್ಟು ಹಾಕಿದೆ

Join Whatsapp