ಆರ್ ಎಸ್ ಎಸ್ ಸಂಘಟನೆಯವರು ತಲೆ ಇಲ್ಲದ ದೇಶದ್ರೋಹಿಗಳು: ಡಾ.ಎಚ್.ಸಿ.ಮಹದೇವಪ್ಪ

Prasthutha|

ಬೆಂಗಳೂರು : ಬೆಲೆ ಏರಿಕೆಯಿಂದ ಜನ ಸಾಮಾನ್ಯರೊಡನೆ ಕಣ್ಣ ಮುಂದಿದ್ದರೂ ಕೂಡಾ ಅದನ್ನು ಖಂಡಿಸದೇ ಕಣ್ಣು ಮುಚ್ಚಿಕೊಂಡು ಚಪ್ಪಾಳೆ ಹೊಡೆಯುವ ಆರ್ ಎಸ್ ಎಸ್ ಸಂಘಟನೆಯವರು ತಲೆ ಇಲ್ಲದ ದೇಶದ್ರೋಹಿಗಳು. ಇನ್ನು ಇಂತವರ ಹಿತಾಸಕ್ತಿಯನ್ನು ಕಾಪಾಡಲು ಕೆಲಸ ಮಾಡುತ್ತಿರುವ ಬಿಜೆಪಿ ಪಕ್ಷವೂ ಕೂಡಾ ದ್ರೋಹಿಗಳ ಮತ್ತು ಮೋಸಗಾರರ ಕೂಟವೇ ಹೌದು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಾಪ್ರಹಾರ ನಡೆಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಪ್ರತಿದಿನ 2 ಟನ್ ನಷ್ಟು ಗೋಮಾಂಸವು ರಫ್ತಾಗುತ್ತಿದೆ ಎಂದು ಗೋವಾದ ಮುಖ್ಯಮಂತ್ರಿ ಹೇಳಿದ್ದಾರೆ. ಗೋ ರಕ್ಷಣೆ ಎಂದು ನಾಟಕವಾಡುವ ಬಿಜೆಪಿ ಸರ್ಕಾರ ಗೋವಾಗೆ ಪ್ರತಿದಿನ ಗೋಮಾಂಸ ರಫ್ತು ಮಾಡುವ ಮೂಲಕ ನೀವು ಗೋರಕ್ಷಣೆ ರಕ್ಷಣೆ ಮಾಡುತ್ತಿದ್ದೀರೋ ಇಲ್ಲವೇ ಗೋಮಾಂಸದ ತೆರಿಗೆ ಸಂಗ್ರಹ ಮಾಡುತ್ತಿದ್ದೀರೋ? ಎಂದು ವ್ಯಂಗ್ಯವಾಡಿದ್ದಾರೆ.

Join Whatsapp