ಸರ್ಕಾರದ ಎಲ್ಲ ಸಂಸ್ಥೆಗಳಲ್ಲೂ RSS ತನ್ನ ಜನರನ್ನು ಇರಿಸಿದೆ: ರಾಹುಲ್ ಗಾಂಧಿ

Prasthutha|

ಲೇಹ್: ಸರ್ಕಾರದ ಪ್ರತಿ ಸಂಸ್ಥೆಯಲ್ಲೂ ಆರ್ ಎಸ್ ಎಸ್ ತನ್ನ ಜನರನ್ನು ಇರಿಸುತ್ತಿದೆ, ಅವರ ಮೂಲಕ ಎಲ್ಲವನ್ನೂ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

- Advertisement -


ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊದಲ ಬಾರಿಗೆ ಲಡಾಖ್ ಗೆ ಭೇಟಿ ನೀಡಿರುವ ಅವರು ಲೇಹ್ ನಲ್ಲಿ ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ಕಿಡಿಕಾರಿದ್ದಾರೆ.


ನೀವು ಕೇಂದ್ರ ಸರ್ಕಾರದ ಯಾವುದೇ ಸಚಿವರನ್ನು ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನ ನಡೆಸುತ್ತಿಲ್ಲ ಎಂದೇ ನಿಮಗೆ ಹೇಳುತ್ತಾರೆ. ಆರ್ ಎಸ್ ಎಸ್ ನಿಂದ ನಿಯೋಜಿತವಾದ ವ್ಯಕ್ತಿಗಳು ವಾಸ್ತವವಾಗಿ ಈ ಸಚಿವಾಲಯಗಳನ್ನು ನಡೆಸುತ್ತಿದ್ದಾರೆ. ಅವರೇ ಏನು ಮಾಡಬೇಕೆಂದು ಅವರೇ ಸೂಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Join Whatsapp