ಆರೆಸ್ಸೆಸ್ ನಿಯಂತ್ರಿತ ‘ಬಿಜೆಪಿ’ ದೇಶದ ಜಾತ್ಯತೀತ ಚಾರಿತ್ರ್ಯವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ: ಸಿಪಿಐ(ಎಂ) ಟೀಕೆ

Prasthutha|

ಕಣ್ಣೂರು: ನಾವು ಜಾತಿ-ಮತಗಳ ಬೇಧ ಭಾವವಿಲ್ಲದೆ ಭಾರತೀಯರಾಗಿದ್ದೇವೆ. ಆದರೆ ಆರೆಸ್ಸೆಸ್ ನಿಯಂತ್ರಿತ  ಆಡಳಿತ ಪಕ್ಷ ಬಿಜೆಪಿ ನಮ್ಮ ದೇಶದ ಜಾತ್ಯತೀತ ಚಾರಿತ್ರ್ಯವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ. ಇದು ದೇಶ ಮತ್ತು ಜನತೆ ಎದುರಿಸುತ್ತಿರುವ ಮೂಲಭೂತ ಸವಾಲು ಎಂದು ಭಾರತೀಯ ಕಮ್ಯೂನಿಸ್ಟ್‌ ಪಕ್ಷ  ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸದಸ್ಯ ಪ್ರಕಾಶ ಕಾರಟ್ ಹೇಳಿದ್ದಾರೆ.

- Advertisement -

ಕಣ್ಣೂರಿನಲ್ಲಿ ನಡೆದ ಸಿಪಿಐ(ಎಂ) ಮಹಾ ಅಧಿವೇಶನದಲ್ಲಿ ‘ಜಾತ್ಯತೀತತೆಗೆ ಸವಾಲುಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಕಾಂಗ್ರೆಸ್ ಮುಖಂಡ ಮತ್ತು ಸಂಸತ್ ಸದಸ್ಯ ಶಶಿ ತರೂರ್ ಅವರನ್ನು ಆಹ್ವಾನಿಸಲಾಗಿತ್ತು. ಅವರು ಭಾಗವಹಿಸಲು ಒಪ್ಪಿದ್ದರು. ಜಾತ್ಯತೀತ ಪ್ರಜಾಪ್ರಭುತ್ವ ಮನಸ್ಸಿನ ಪ್ರತಿಯೊಬ್ಬರೂ ಈ ವಿಷಯದ ಬಗ್ಗೆ ಚರ್ಚೆ ಅಗತ್ಯ ಎಂದು ಒಪ್ಪುತ್ತಾರೆ. ಈ ವಿಷಯದಲ್ಲಿ ಶಶಿ ತರೂರ್ ಅವರ ಹೇಳಿಕೆಯನ್ನೂ ನೋಡಿದ್ದೇನೆ. ಇದೊಂದು ಮಹತ್ವದ ವಿಚಾರ ಸಂಕಿರಣ, ನಾನು ಇದರಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಅವರು ಬರೆದಿದ್ದರು. ಆದರೆ ಕೇರಳದಲ್ಲಿ ಅವರ ಪಕ್ಷದ ನಾಯಕತ್ವ ಮತ್ತು ಎಐಸಿಸಿ ನಾಯಕತ್ವ ಅವರಿಗೆ ಭಾಗವಹಿಸಬಾರದೆಂದು ಹೇಳಿದೆ. ಆದ್ದರಿಂದ ಅವರು ಗೈರುಹಾಜರಾಗಿದ್ದಾರೆ. ಕಾಂಗ್ರೆಸ್ ಮುಖಂಡರ ಇಂತಹ ನಿಲುವುಗಳು, ಜನರ ನಡುವೆ ಅವರ ವಿಶ್ವಾಸಾರ್ಹತೆಯನ್ನು ಧ್ವಂಸ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜ ಮತ್ತು ರಾಜ್ಯ ಕಾಂಗ್ರೆಸ್  ಅಧ್ಯಕ್ಷ ರಾಮಚಂದ್ರನ್ ಕಡನ್ನಪ್ಪಳ್ಳಿ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು. ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಇ ಪಿ ಜಯರಾಜನ್ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.

Join Whatsapp