ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ

Prasthutha|

ಟೊರಂಟೊ: ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕೆನಡಾದ ಟೊರಂಟೊದಲ್ಲಿ ಅಪರಿಚಿತ ದುಷ್ಕರ್ಮಿ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.

- Advertisement -

ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಕಾರ್ತಿಕ್ ವಾಸುದೇವ್(21) ಎಂಬ ವಿದ್ಯಾರ್ಥಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕಾರ್ತಿಕ್ ಟೊರಂಟೊದ ಶೇರ್‌ಬಾರ್ನೆ ಸಬ್‌ ವೇ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ 5.30 ರ ಸುಮಾರು ತೆರಳುತ್ತಿದ್ದಾಗ ಮುಸುಕುದಾರಿಯೊಬ್ಬ ಬಂದು ಮನಸೋಇಚ್ಚೆ ಗುಂಡು ಹಾರಿಸಿದ್ದು ಕಂಡು ಬಂದಿದೆ. ಬಳಿಕ ಕಾರ್ತಿಕ್ ಅವರನ್ನು ರೈಲು ನಿಲ್ದಾಣದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

- Advertisement -

ಕಾರ್ತಿಕ್ ವಾಸುದೇವ್ ಅವರು ಟೊರಂಟೊದ ಸೆನೆಕಾ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಅವರ ನಿಧನಕ್ಕೆ ಕೆನಡಾದಲ್ಲಿನ ರಾಯಭಾರ ಕಚೇರಿ ಹಾಗು ಸೆನೆಕಾ ಕಾಲೇಜು ಆಘಾತ ವ್ಯಕ್ತಪಡಿಸಿದೆ. ಹಂತಕನ ಉದ್ದೇಶ ಏನಿತ್ತೆಂಬುದು ಇನ್ನೂ ತಿಳಿದು ಬಂದಿಲ್ಲ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಟೊರಂಟೊ ಪೊಲೀಸರು ತಿಳಿಸಿದ್ದಾರೆ.

Join Whatsapp