ಸುರತ್ಕಲ್ ಪಾಝಿಲ್ ಹತ್ಯೆಯ ಹಿಂದೆ ಆರೆಸ್ಸೆಸ್-ಬಿಜೆಪಿ: ಪಾಪ್ಯುಲರ್ ಫ್ರಂಟ್

Prasthutha|

ಸುರತ್ಕಲ್ ನಲ್ಲಿ ನಡೆದ ಪಾಝಿಲ್ ಹತ್ಯೆಗೆ ಆರೆಸ್ಸೆಸ್-ಬಿಜೆಪಿ ನಾಯಕರ ಪ್ರಚೋದನೆಯೇ ನೇರ ಕಾರಣ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.

- Advertisement -

ಸಾವಿನ ವ್ಯಾಪಾರವನ್ನು ಕರಗತ ಮಾಡಿಕೊಂಡಿರುವ ಆರೆಸ್ಸೆಸ್-ಬಿಜೆಪಿ ಕೊಲೆ ರಾಜಕೀಯದ ಮೂಲಕ ದ.ಕ.ಜಿಲ್ಲೆಯನ್ನು ಪ್ರಕ್ಷ್ಯುಬ್ಧವಾಗಿಡಲು ಹವಣಿಸುತ್ತಿದೆ. ಈ ಕಾರಣಕ್ಕಾಗಿಯೇ ಸುಳ್ಯದಲ್ಲಿ ಪ್ರವೀಣ್ ಹತ್ಯೆಯಾದಾಗ ಅವರು ಬಹಳಷ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದರು ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವ ಕೃತ್ಯಗಳ‌‌ನ್ನು ನಡೆಸಿದರು. ಅದರ ಜೊತೆಗೇ ಸುಳ್ಯದಲ್ಲಿ ಶವ ಮೆರವಣಿಗೆಯ ಉದ್ದಕ್ಕೂ ಸಂಘಪರಿವಾರದ ಕಾರ್ಯಕರ್ತರಲ್ಲಿ ಪ್ರತೀಕಾರದ ಮನೋಸ್ಥಿತಿಯನ್ನು ಸೃಷ್ಟಿಸಿದರು. ಇದರ‌ ಮುಂದುವರಿದ ಭಾಗವಾಗಿಯೇ ಇಂದು ಪಾಝಿಲ್ ಎಂಬ ಅಮಾಯಕ ಯುವಕನ ಹತ್ಯೆ ನಡೆದಿದೆ.

ಈ ನಡುವೆ, ಕೋಮು ವೈಷಮ್ಯದಿಂದ ನಡೆದ ಈ ಕೊಲೆಯನ್ನು ವ್ಯವಹಾರಿಕ ಕಲಹದಿಂದ ನಡೆದ ಕೊಲೆ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಇದು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನವಾಗಿದ್ದು, ಈ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದೇ ಸೂಕ್ತವಾಗಿದೆ.

- Advertisement -

ಸಂಘಪರಿವಾರ ದುಷ್ಕರ್ಮಿಗಳಿಂದ ಹತ್ಯೆಯಾದ‌ ಮಸೂದ್‌ ಬಗ್ಗೆ ಮೌನ ವಹಿಸಿದ ಮಾಧ್ಯಮಗಳೂ ಪ್ರವೀಣ್ ಘಟನೆಯನ್ನು ವೈಭವೀಕರಿಸಿಕೊಂಡು ಸುದ್ದಿ ಪ್ರಸಾರ ಮಾಡಿದವು. ಈ ಮೂಲಕ ದ್ವೇಷ, ಅಸಹನೆ‌ ಬಿತ್ತಿದ್ದ ಕೆಲವೊಂದು ಪೂರ್ವಾಗ್ರಹಪೀಡಿತ ಮಾಧ್ಯಮಗಳು ಕೂಡ ಪಾಝಿಲ್ ಹತ್ಯೆಯ ಹೊಣೆಯನ್ನು ಹೊರಬೇಕಾಗಿದೆ ಎಂದು ಇಜಾಝ್ ಅಹ್ಮದ್ ಪ್ರಕಟ‌ನೆಯಲ್ಲಿ ಹೇಳಿದ್ದಾರೆ.

Join Whatsapp