ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ ರಾಬರ್ಟ್ ವಾದ್ರಾ

Prasthutha|

ಅಮೇಥಿ: ಲೋಕಸಭೆ ಚುನಾವಣೆಯಲ್ಲಿ ರಾಬರ್ಟ್ ವಾದ್ರಾ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

- Advertisement -

ಮಾಧ್ಯಮ ಜೊತೆ ಮಾತನಾಡಿದ ವಾದ್ರಾ, ಅಮೇಥಿ ಕ್ಷೇತ್ರದ ಜನರು ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಇದ್ದಾರೆ. ಅಮೇಥಿ ಜನರಿಗೆ ಗಾಂಧಿ ಪರಿವಾರದವರು ಬೇಕಾಗಿದ್ದಾರೆ. ಅಮೇಥಿ, ರಾಯ್ ಬರೇಲಿ, ಸುಲ್ತಾನ್‌ಪುರ ಮತ್ತು ಜಗದೀಶ್‌ಪುರದ ಕ್ಷೇತ್ರದ ಅಭಿವೃದ್ಧಿಗೆ ಗಾಂಧಿ ಕುಟುಂಬವು ಹಲವು ವರ್ಷಗಳಿಂದ ಶ್ರಮಿಸಿದೆ. ನಾನು ಸಂಸದನಾಗುವುದಾದರೆ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಲಿ ಎಂದು ಕ್ಷೇತ್ರದ ಜನರು ನಿರೀಕ್ಷಿಸುತ್ತಿದ್ದಾರೆ. ನಾನು ರಾಜಕೀಯಕ್ಕೆ ಬರುವುದಾದರೆ ಅಮೇಥಿ ಕ್ಷೇತ್ರವೇ ನನ್ನ ಆಯ್ಕೆ ಆಗಿರುತ್ತದೆ ಎಂದಿದ್ದಾರೆ.

ಅಮೇಥಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ರಾಬರ್ಟ್​ ವಾದ್ರಾ, ಈಗಿನ ಸಂಸದರಿಂದ ಅಮೇಥಿ ಜನರು ರೋಸಿ ಹೋಗಿದ್ದಾರೆ. ಆಕೆಯನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ ಎಂದು ಜನರಿಗೆ ಮನದಟ್ಟಾಗಿದೆ ಎಂದರು.

- Advertisement -

ವರ್ಷಗಳಿಂದ ಗಾಂಧಿ ಕುಟುಂಬದವರು ರಾಯ್ ಬರೇಲಿ, ಅಮೇಥಿ, ಸುಲ್ತಾನ್​ಪುರ್​ನಲ್ಲಿ ಪರಿಶ್ರಮ ಹಾಕಿದ್ದಾರೆ ಎಂದು ವಾದ್ರಾ ತಿಳಿಸಿದ್ದಾರೆ. ಜನರು ಬಯಸಿದರೆ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಯೋಚಿಸುವುದಾಗಿ ಈ ಹಿಂದೆಯೇ ವಾದ್ರಾ ಹೇಳಿದ್ದರು.

Join Whatsapp