ರಾಜ್ಯ ರಾಜಧಾನಿಯಲ್ಲಿ ಮಕ್ಕಳು, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಏರಿಕೆ; ಅಪರಾಧ ಪ್ರಕರಣಗಳ ವರದಿ ಬಿಡುಗಡೆ

Prasthutha|

ಬೆಂಗಳೂರು: ವರದಕ್ಷಿಣೆ ಕಾಯ್ದೆ, ಪೋಕ್ಸೊ, ದೌರ್ಜನ್ಯ ಮುಂತಾದ  ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳು  ಸಿಲಿಕಾನ್ ಸಿಟಿಯಲ್ಲಿ ಶೇ 30ರಷ್ಟು ಏರಿಕೆಯಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, 2022ನೇ ಸಾಲಿನಲ್ಲಿ ಕೊಲೆ, ಸುಲಿಗೆ, ಡಕಾಯಿತಿ, ಸರ ಅಪಹರಣ, ಚಿನ್ನಾಭರಣ, ವಾಹನ ಕಳವು ಪ್ರಕರಣಗಳು ಇಳಿಕೆ ಕಂಡಿದ್ದರೂ ಇತರ ಪ್ರಕರಣಗಳು ಹಚ್ಚುತ್ತಿವೆ ಎಂದು ತಿಳಿಸಿದರು.

ಮಹಿಳೆಯರು ಹಾಗೂ ಯುವತಿಯರಲ್ಲಿ ಹೆಚ್ಚು ಜಾಗೃತಿ ಮೂಡಿದ್ದು, ದೌರ್ಜನ್ಯಕ್ಕೆ ಒಳಗಾದವರು ಪ್ರಕರಣ ದಾಖಲಿಸುತ್ತಿದ್ದಾರೆ. ಇದರಿಂದ ದಾಖಲಾದ ಪ್ರಕರಣಗಳು ಏರಿಕೆಯಾಗಿವೆ ಎಂದರು.

- Advertisement -

‘ಕಳೆದ ವರ್ಷ ಹಿಜಾಬ್ ಸಂಬಂಧದ ಗಲಾಟೆ, ಮೇಕೆದಾಟು ಪಾದಯಾತ್ರೆ, ಕಾರ್ಮಿಕ, ರೈತರ ಹಾಗೂ ಸಂಘ ಸಂಸ್ಥೆಗಳಿಂದ ನಗರದಲ್ಲಿ ಒಟ್ಟು 500 ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ.

ವೈಯಕ್ತಿಕ, ಕೌಟುಂಬಿಕ, ಆಸ್ತಿ, ಅನೈತಿಕ ಸಂಬಂಧ ಕಾರಣಕ್ಕೆ ಕೊಲೆಗಳು ನಡೆದಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಡಕಾಯಿತಿಯಲ್ಲಿ ಶೇ 41ರಷ್ಟು, ಸುಲಿಗೆ ಶೇ 6, ಸರ ಅಪಹರಣ ಶೇ 33, ಮನೆ ಕನ್ನ ಪ್ರಕರಣದಲ್ಲಿ ಶೇ 31ರಷ್ಟು ಇಳಿಕೆಯಾಗಿವೆ. ಈ ವರ್ಷವೂ ತಂತ್ರಜ್ಞಾನ ಬಳಸಿಕೊಂಡು, ಆರೋಪಿಗಳ ಪತ್ತೆಹಚ್ಚಲಾಗುವುದು ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.

2022ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ನಗರದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳ ವರದಿಯನ್ನು ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದಾರೆ.

Join Whatsapp