‘ರಿಪಬ್ಲಿಕ್ ಟಿವಿ’ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ ಬಂಧನ | ಟಿಆರ್ ಪಿ ತಿರುಚಿದ ಪ್ರಕರಣ

Prasthutha|

ಮುಂಬೈ : ‘ರಿಪಬ್ಲಿಕ್ ಟಿವಿ’ ಪ್ರಧಾನ ಸಂಪಾದಕ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನದ ಆರು ದಿನಗಳ ಬಳಿಕ, ಇದೀಗ ಅದೇ ಚಾನೆಲ್ ನ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

- Advertisement -

ಟಿಆರ್ ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿ ಸಿಂಗ್ ಬಂಧನವಾಗಿದೆ. ಸಿಂಗ್ ವಿರುದ್ಧ ಐಪಿಸಿ ಕಲಂ 420 ಮತ್ತು ಕಲಂ 120ಬಿಯಡಿ ದೂರು ದಾಖಲಾಗಿದೆ.

ಗೋಸ್ವಾಮಿ ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಆರು ದಿನಗಳ ಹಿಂದೆಯಷ್ಟೇ ಬಂಧಿತನಾಗಿದ್ದಾನೆ. ಇದೀಗ ಚಾನೆಲ್ ನ ಸಹಾಯಕ ಉಪಾಧ್ಯಕ್ಷ ಸಿಂಗ್ ಬಂಧನದ ಮೂಲಕ ಚಾನೆಲ್ ನ ಒಂದೊಂದೇ ಯಡವಟ್ಟುಗಳು ಬಹಿರಂಗವಾಗ ತೊಡಗಿವೆ.

- Advertisement -

ಇತರ ಚಾನೆಲ್ ಗಳಿಗಿಂತ ತಾವೇ ಮುಂದಿದ್ದೇವೆ ಎಂದು ತೋರಿಸಲು ಟಿಆರ್ ಪಿಯನ್ನು ತಿರುಚಿದ ಆರೋಪ ‘ರಿಪಬ್ಲಿಕ್ ಟಿವಿ’ ಮೇಲಿದೆ. ಸಿಂಗ್ ಅವರನ್ನು ಇಂದು ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ.   

Join Whatsapp