ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ಬೇಡಜಂಗಮ ಜಾತಿಯ ನಕಲಿ ಸರ್ಟಿಫಿಕೇಟ್ ಕೊಡಿಸಿದ ರೇಣುಕಾಚಾರ್ಯ

Prasthutha|

ಬೆಂಗಳೂರು: ಬಿಜೆಪಿ ಎಂದರೆ ನಕಲಿಗಳ ಪಕ್ಷ ಎಂದು ಮತ್ತೊಮ್ಮೆ ರೇಣುಕಾಚಾರ್ಯ ಸಾಬೀತುಪಡಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.

- Advertisement -

ರೇಣುಕಾಚಾರ್ಯ ತಮ್ಮ ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ಬೇಡಜಂಗಮ ಜಾತಿಯ ನಕಲಿ ಸರ್ಟಿಫಿಕೇಟ್ ಕೊಡಿಸಿರುವ ಪ್ರಕರಣದಿಂದ ಬಿಜೆಪಿಗರ ಅಕ್ರಮ, ನೈತಿಕ ದಿವಾಳಿತನ ಬಯಲಾಗಿದೆ.

ಬೊಮ್ಮಾಯಿಯವರೇ, ಅಶಕ್ತ ಸಮುದಾಯಗಳಿಗೆ ಅನ್ಯಾಯವೆಸಗುತ್ತಿರುವ ರೇಣುಕಾಚಾರ್ಯರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿ ಇನ್ನೂ ಏಕೆ ಇಟ್ಟುಕೊಂಡಿದ್ದೀರಿ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಟೀಕಿಸಿದೆ.

- Advertisement -

“ಅಶಕ್ತರ ಸವಲತ್ತು ಕಿತ್ತುಕೊಳ್ಳಲು ನಕಲಿ ಜಾತಿ ಸರ್ಟಿಫಿಕೇಟ್ ಪಡೆದ ರೇಣುಕಾಚಾರ್ಯ ಕುಟುಂಬದ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಏಕೆ ಬೊಮ್ಮಾಯಿಯವರೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ .

Join Whatsapp