ಸರಕಾರಿ ಬಸ್ಸಿನಲ್ಲಿ ಧಾರ್ಮಿಕ ಚಿಹ್ನೆ : ದೂರು ಕೊಟ್ಟ ಬಳಿಕ ಚಿಹ್ನೆ ತೆಗೆದುಹಾಕಿದ KSRTC

Prasthutha|

ರಾಮನಗರ: ಸಾರ್ವಜನಿಕ ಸಾರಿಗೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಕಾನೂನಿಗೆ ವಿರುದ್ದವಾಗಿ ನಿರ್ದಿಷ್ಟ ಧರ್ಮದ ಚಿಹ್ನೆ ಯನ್ನು ಅಂಟಿಸಿರುವ ವಿಚಾರವಾಗಿ ಸಾರ್ವಜನಿಕರೊಬ್ಬರು ದೂರು ನೀಡಿದ ಬಳಿಕ KSRTC ಸಂಸ್ಥೆಯು ಚಿತ್ರವನ್ನು ತೆಗೆದುಹಾಕಿದೆ.

- Advertisement -

ಎಲ್ಲಾ ಧರ್ಮದವರು ನಿತ್ಯ ಬಳಸುವ ಸರಕಾರಿ ಬಸ್ಸನ್ನು ಕೇಸರೀಕರಣಗೊಳಿಸಿರುವುದು ಸರಿಯಲ್ಲ. ಸರಕಾರಿ ಬಸ್ಸುಗಳು ಯಾವುದೇ ಧರ್ಮದ ಸೊತ್ತಲ್ಲ, ಬಸ್ಸಲ್ಲಿರುವ ಧಾರ್ಮಿಕ ಸಂಕೇತವನ್ನು ತೆರವುಗೊಳಿಸುವಂತೆ ವ್ಯಕ್ತಿಯೊಬ್ಬರು ಟ್ವಿಟರ್ ಮೂಲಕ ದೂರು ನೀಡಿದ ನಂತರ ಲಗತ್ತಿಸಲಾಗಿರುವ ಧಾರ್ಮಿಕ ಚಿಹ್ನೆಯನ್ನು ತೆರವುಗೊಳಿಸಿದೆ.

ಈ ಬಗ್ಗೆ ಟ್ವಿಟರ್ ಮೂಲಕ KSRTC ಸಂಸ್ಥೆಯು ದೂರನ್ನು ದಾಖಲಿಸಿ ಕ್ರಮಕೈಗೊಂಡಿದೆ.

Join Whatsapp