ಇತಿಹಾಸದಲ್ಲೇ ದಾಖಲೆ ಮಳೆ; ಕಾಫಿನಾಡಿಗರು ಕಂಗಾಲು

Prasthutha|

ಚಿಕ್ಕಮಗಳೂರು : ಕೇವಲ  ಒಂದು ಗಂಟೆಯ ಹೊತ್ತು ಸುರಿದ ರಣರಕ್ಕಸ ಮಳೆಗೆ  ಕಾಫಿನಾಡಿನ ಜನರು ಬೆಚ್ಚಿಬಿದ್ದಿದ್ದಾರೆ.

- Advertisement -

ತಾಲೂಕಿನ ಸಾರಗೋಡು, ಹುಯಿಗೆರೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಸಾರಗೋಡಿನಲ್ಲಿ ಒಂದೇ ಗಂಟೆಗೆ 200 ಮಿ.ಮೀ.ಗೂ ಅಧಿಕ ಮಳೆ ಸುರಿದಿದೆ.

ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು,ನೀರಿನ ರಭಸಕ್ಕೆ  ಕಾಂಪೌಂಡ್ ಗಳು ಕುಸಿತಗೊಂಡಿವೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿಯುತ್ತಿದ್ದು,ಒಂದೇ ಗಂಟೆಗೆ ದಾಖಲೆ ಮಳೆ ಕಂಡು ಕಾಫಿನಾಡಿಗರು ಕಂಗಾಲಾಗಿದ್ದಾರೆ.




Join Whatsapp