ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ| ಸ್ವಾಮೀಜಿ ಬಂಧನ

Prasthutha|

ಜೈಪುರ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಸ್ವಾಮೀಜಿ ಸರ್ಜುದಾಸ್ ಮಹಾರಾಜ್ ಅವರನ್ನು ಬಂಧಿಸಲಾಗಿದೆ.

- Advertisement -

ಸಂತ್ರಸ್ತೆಯ ತಾಯಿ ಇತ್ತೀಚೆಗೆ ಆ್ಯಸಿಡ್ ದಾಳಿಗೆ ಒಳಗಾಗಿದ್ದು, ದಾಳಿ ಹಿಂದೆ ಸರ್ಜುದಾಸ್ ಮಹಾರಾಜ್ ಇರುವುದಾಗಿ ಅವರು ದೂರಿದ್ದರು. ತಾಯಿಯ ಶುಶ್ರೂಷೆ ಮಾಡುತ್ತಿದ್ದ ಸಂತ್ರಸ್ತೆ, ಆಶ್ರಮದಲ್ಲಿ ಸ್ವಾಮೀಜಿ ನೀಡಿದ ಕಿರಿಕುಳಗಳ ಕುರಿತು ವಿವರಿಸುವ ವೇಳೆ ತಾನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸರ್ಜುದಾಸ್ ರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಹೇಳಿದ್ದಳು. ಆರೋಪದ ಕುರಿತು ತನಿಖೆ ನಡೆಸಿದ ಬಳಿಕ ಸ್ವಾಮೀಜಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸ್ವಾಮೀಜಿ ವಿರುದ್ಧ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

- Advertisement -

ಸರ್ಜುದಾಸ್ ಐದು ಆಶ್ರಮಗಳ ಮುಖ್ಯಸ್ಥರಾಗಿದ್ದು, ಮಹಾರಾಷ್ಟ್ರ, ಅಯೋಧ್ಯ ಮತ್ತು ಬದ್ರಿನಾಥದಲ್ಲಿ ಅವರು ಆಶ್ರಮಗಳನ್ನು ಹೊಂದಿದ್ದಾರೆ.

Join Whatsapp