ರಮಝಾನ್ ತಿಂಗಳ ಚಂದ್ರ ದರ್ಶನ: ಕರಾವಳಿಯಾದ್ಯಂತ ನಾಳೆಯಿಂದ ಉಪವಾಸ ಆರಂಭ

Prasthutha|

ಮಂಗಳೂರು: ಪವಿತ್ರ ರಂಝಾನ್ ಚಂದ್ರದರ್ಶನ ಆಗಿರುವ ಹಿನ್ನೆಲೆ ಕರಾವಳಿಯಲ್ಲಿ ನಾಳೆಯಿಂದ(ಆದಿತ್ಯವಾರ) ಉಪವಾಸ ಆರಂಭವಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆಯಿಂದಲೇ ರಂಝಾನ್ ಉಪವಾಸ ಪ್ರಾರಂಭವಾಗಲಿದೆ.

- Advertisement -

ಭಟ್ಕಳದಲ್ಲಿ ಚಂದ್ರದರ್ಶನವಾಗಿದೆ. ಭಾನುವಾರ ರಮಝಾನ್ ಉಪವಾಸ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಜಿ ತ್ವಾಕಾ ಅಹಮದ್ ಮುಸ್ಲಿಯರ್ ಘೋಷಿಸಿದ್ದಾರೆ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಅಲ್ ಹಾಜ್ ಸಯ್ಯದ್ ಅಹ್ಮದ್ ಬಾಷಾ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಯೂ ಶನಿವಾರ ಚಂದ್ರದರ್ಶನವಾಗಿರುವುದರಿಂದ ಭಾನುವಾರದಿಂದ ಉಪವಾಸ ಆಚರಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಚಂದ್ರದರ್ಶನ ಸಮಿತಿ ಪ್ರಕಟಿಸಿದೆ.

Join Whatsapp