ಸಂತ್ರಸ್ತೆ ಯುವತಿಗೆ ರಮೇಶ್‌ ಜಾರಕಿಹೊಳಿ ಬೆದರಿಕೆ ಹಾಕುತ್ತಿದ್ದಾರೆ: ಸಂತ್ರಸ್ತೆ ಪರ ವಕೀಲ ಹೇಳಿಕೆ

Prasthutha|

ಬೆಂಗಳೂರು: ಸೆಕ್ಸ್ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಗೆ ಅಧಿಕಾರವನ್ನು ದುರ್ಬಳಕೆ ಮಾಡಿ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿಯು ಯುವತಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಯುವತಿ ಪರ ವಕೀಲರಾದ ಜಗದೀಶ್ ಮಹಾದೇವ್ ಹೇಳಿದ್ದಾರೆ.

- Advertisement -

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಜಗದೀಶ್ ಮಹಾದೇವ್, ಆರೋಪಿಯ ವಿರುದ್ಧ ಕಠಿಣವಾದ ಸೆಕ್ಷನ್ ಹಾಕಿರುವುದರಿಂದ ಮಾಧ್ಯಮದ ಮೂಲಕ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ತಕ್ಷಣ ಅದನ್ನು ಅವರು ನಿಲ್ಲಿಸಬೇಕು. ಅದೇ ರೀತಿ ಪೊಲೀಸ್ ಇಲಾಖೆಯಿಂದ ಸಕರಾತ್ಮಕ ಪ್ರತಿಕ್ರಿಯೆ ದೊರಕಬೇಕಿತ್ತು. ಆದರೆ ಯಾವುದೂ ದೊರೆತಿಲ್ಲ. ಸೋಮವಾರದವರೆಗೆ ನಾವು ನೋಡುತ್ತೇವೆ. ಅಲ್ಲಿ ತನಕವೂ ನಮಗೆ ಸರಿಯಾದ ಪ್ರತಿಕ್ರಿಯೆ ಬರದಿದ್ದರೆ ನಾವು ಹೈಕೋರ್ಟ್ ಮೋರೆ ಹೋಗುವ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

Join Whatsapp