ಗೂಡಿನಬಳಿ ಭೂ ಕುಸಿತ: ಘಟನೆ ಸ್ಥಳಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ

Prasthutha|


ಬಂಟ್ವಾಳ : ಗೂಡಿನಬಳಿ ನೀರಿನ ಟ್ಯಾಂಕ್ ಬಳಿ ಭೂ ಕುಸಿತ ಕಂಡಿದ್ದು ಸ್ಥಳೀಯ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.

- Advertisement -

ನಿನ್ನೆ ರಾತ್ರಿ ಘಟನೆ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವರಾದ ರಾಮಾನಥ ರೈ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದರು. ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಸಹಕಾರ ನೀಡಿಲ್ಲ ಎಂದು ಊರಿನ ನಾಗರಿಕರು ಮಾಜಿ ಸಚಿವರ ಬಳಿ ದೂರಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷರಾದ ಶರೀಫ್ ಶಾಂತಿಅಂಗಡಿ, ಪುರಸಭೆ ಅಧಿಕಾರಿಗಳಾದ ಸ್ವಾಮಿ, ಡೊಮೆಲ್ಲೊ, ಇಕ್ಬಾಲ್, ಇಕ್ಬಾಲ್ ಐಮ್ ರ್,ಗೂಡಿನಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾಸಿಂ Mk, ಗೂಡಿನಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್, ತೌಸೀಫ್, ಸಿರಾಜ್, ಟಿ. ಜಸೀರ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

Join Whatsapp