ಟೆಂಟ್‌ನೊಳಗೆ ಬೊಂಬೆ ಇಟ್ಟು ರಾಮ ಅಂದಿದ್ರು: ಹೇಳಿಕೆಗೆ ಬದ್ಧನಿದ್ದೇನೆ: ರಾಜಣ್ಣ

Prasthutha|

ತುಮಕೂರು: ಬಾಬ್ರಿ ಮಸೀದಿ ಬೀಳಿಸಿದಾಗ ನಾನೂ ಹೋಗಿದ್ದೆ. ಟೆಂಟ್‌ನೊಳಗೆ ಬೊಂಬೆ ಇಟ್ಟು ರಾಮ ಅಂದಿದ್ರು’ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

- Advertisement -

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 90ರ ದಶಕದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಸಮಯದಲ್ಲಿ ಅಲ್ಲಿಗೆ ಭೇಟಿ ಕೊಟ್ಟಾಗ ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಎಂದು ಹೇಳಿದ ಅವರು, ಬೊಂಬೆಯನ್ನು ದೇವರು ಅಂತಾ ಹೇಳಿದ್ರೆ ಏನು ತಪ್ಪು? ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯವರು ನನ್ನನ್ನು ರಾವಣ ಎಂದಿರೋದರಿಂದ ನನಗೆ ಬೇಸರವಿಲ್ಲ. ರಾವಣ ಎನಿಸಿಕೊಳ್ಳಲೂ ಸಿದ್ಧನಿದ್ದೇನೆ. ಅವನಂಥ ದೈವ ಭಕ್ತ ಯಾರೂ ಇರಲಿಲ್ಲ. ಆದರೆ ಬಿಜೆಪಿಯವರೆಲ್ಲ ಡೋಂಗಿ ದೈವ ಭಕ್ತರು ಎಂದು ಅವರು ಹೇಳಿದರು.

Join Whatsapp