ವಂದೇ ಭಾರತ್ ರೈಲಿನಲ್ಲಿ ಮಳೆ ನೀರು ಸೋರಿಕೆ; ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ರಿಪೇರಿ

Prasthutha|

ಕಣ್ಣೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಸಿರು ನಿಶಾನೆ ತೋರಿಸಿದ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನಲ್ಲಿ  ಸೋರಿಕೆಯುಂಟಾಗಿದೆ. ಮಂಗಳವಾರ ಸುರಿದ ಮಳೆಗೆ ರೈಲಿನ ಎಕ್ಸಿಕ್ಯೂಟಿವ್  ಬೋಗಿಯ ಮೇಲ್ಛಾವಣಿಯಲ್ಲಿ  ಸೋರಿಕೆಯುಂಟಾಗಿದ್ದು ಬೋಗಿಯಲ್ಲಿ ಮಳೆ ನೀರು ತುಂಬಿತ್ತು.

- Advertisement -

ಮಂಗಳವಾರ  ರಾತ್ರಿ 11 ಗಂಟೆ ಸುಮಾರಿಗೆ ಕಾಸರಗೋಡಿನಿಂದ ಹೊರಟ ರೈಲು ಕಣ್ಣೂರಿಗೆ ತಲುಪಿತ್ತು. ಕಣ್ಣೂರಿನಲ್ಲಿ ರಾತ್ರಿ ಭಾರಿ ಮಳೆಯಾದ್ದರಿಂದ ಮುಂಜಾನೆ ಬೋಗಿಯಲ್ಲಿ ನೀರು ತುಂಬಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ರಿಪೇರಿ ಕೆಲಸಗಳು ನಡೆಯುತ್ತಿವೆ.

Join Whatsapp