‘ರೈತರ ಶಾಂತಿಯುತ ಸತ್ಯಾಗ್ರಹ ಶೋಷಕ ಸರ್ಕಾರಕ್ಕೆ ಇಷ್ಟವಿಲ್ಲ; ಅದಕ್ಕಾಗಿ ಭಾರತ್ ಬಂದ್’: ರಾಹುಲ್ ಗಾಂಧಿ

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ‘ಭಾರತ್ ಬಂದ್’ ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದು, ರೈತರ ಶಾಂತಿಯುತ ಸತ್ಯಾಗ್ರಹ ಶೋಷಿತ ಸರ್ಕಾರಕ್ಕೆ ಇಷ್ಟವಿಲ್ಲ; ಅದಕ್ಕಾಗಿ ಭಾರತ್ ಬಂದ್ ಆಚರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಸೆ.27ರ ‘ಭಾರತ್ ಬಂದ್’ ಹತ್ತು ತಿಂಗಳಿಂದ ನಡೆಯುತ್ತಿರುವ ರೈತರ ಆಂದೋಲನದ ಭಾಗವಾಗಿದೆ.

‘ರೈತರ ಶಾಂತಿಯುತ ಸತ್ಯಾಗ್ರಹ ಇಂದಿಗೂ ಮುಂದುವರಿದಿದೆ. ಆದರೆ ಶೋಷಿತ ಸರ್ಕಾರಕ್ಕೆ ಅದು ಇಷ್ಟವಿಲ್ಲ. ಅದಕ್ಕಾಗಿಯೇ ಇಂದು ನಾವು ಭಾರತ್ ಬಂದ್ ಗೆ ಕರೆ ನೀಡಿದ್ದೇವೆ’ ಎಂದು “ನಾನು ರೈತರ ಪರವಾಗಿದ್ದೇನೆ” ಎಂಬ ಹ್ಯಾಶ್ ಟ್ಯಾಗ್ ಬಳಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.  

- Advertisement -

ಸುಮಾರು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಬೆಳಿಗ್ಗೆ 6 ರಿಂದ ಸಂಜೆ 4ರವರೆಗೆ ಭಾರತ್ ಬಂದ್ ಗೆ ಕರೆ ನೀಡಿತ್ತು. 10 ವರ್ಷಗಳ ಕಾಲ ಮುಷ್ಕರ ನಡೆಸಬೇಕಾಗಿ ಬಂದರೂ ರೈತರ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದರು.

Join Whatsapp