ಹೆಣ್ಮಕ್ಕಳ ಶಾಪದಿಂದಲೇ ರಾಘವೇಂದ್ರ ಸೋಲುತ್ತಾರೆ: ಈಶ್ವರಪ್ಪ

Prasthutha|

ಶಿವಮೊಗ್ಗ: ಯಡಿಯೂರಪ್ಪ ಅವರು ತಮ್ಮ ಇಬ್ಬರು ಮಕ್ಕಳು, ಶೋಭಾ ಕರಂದ್ಲಾಜೆ ಹಾಗೂ ಭಾರತಿ ಶೆಟ್ಟಿ ಹೊರತಾಗಿ ಬೇರೆಯವರನ್ನು ಬೆಳೆಸುತ್ತಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಮತ್ತೆ ಮಾಜಿ ಸಿಎಂ ವಿರುದ್ಧ ಕಿಡಿಗಾರಿದ್ದಾರೆ.

- Advertisement -

ಬಿಜೆಪಿಯಲ್ಲಿ ಅನೇಕ ಹೆಣ್ಮಕ್ಕಳು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಅವಕಾಶ ನೀಡಲಾಗು ತ್ತಿಲ್ಲ. ಆದ್ದರಿಂದ ಇಂಥವರ ಶಾಪ ಯಡಿಯೂರಪ್ಪರಿಗೆ ತಟ್ಟದೆ ಬಿಡುವು ದಿಲ್ಲ. ಹೆಣ್ಮಕ್ಕಳ ಶಾಪದಿಂದಲೇ ರಾಘವೇಂದ್ರ ಸೋಲುತ್ತಾರೆ ಎಂದಿದ್ದಾರೆ.

ನನಗೆ ಅನ್ಯಾಯ ಮಾಡಿಲ್ಲ ಎಂದು ಹೇಳುವ ಧೈರ್ಯ ಯಡಿಯೂರಪ್ಪರಿಗೆ ಇಲ್ಲ. ಹೀಗಾಗಿ ಅವರು ಗುರುವಾರ ಮಾಧ್ಯಮದೊಂದಿಗೂ ಮಾತನಾಡಿಲ್ಲ ಎಂದಿದ್ದಾರೆ.

Join Whatsapp