ದಿ.ಆರ್.ಧ್ರುವನಾರಾಯಣ್ ಪತ್ನಿ ವೀಣಾ ನಿಧನ

Prasthutha|

ಮೈಸೂರು: ದಿವಂಗತ ಆರ್. ಧ್ರುವ ನಾರಾಯಣ್ ಅವರ ಪತ್ನಿ ವೀಣಾ ಆರ್. ಧ್ರುವನಾರಾಯಣ್ ಶುಕ್ರವಾರ ನಿಧನರಾಗಿದ್ದಾರೆ.

- Advertisement -


ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರು ಮಾರ್ಚ್ 11ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಪತಿಯ ಸಾವಿನ ಕೊರಗಿನಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದರು.
ಧ್ರುವ ನಾರಾಯಣ ಅವರ ಪುತ್ರ ದರ್ಶನ್‌ ಅವರು ತಂದೆಯನ್ನು ಕಳೆದುಕೊಂಡೇ ಸಾಕಷ್ಟು ನೋವಿನಲ್ಲಿದ್ದರು. ಇದೀಗ ತಾಯಿಯ ಮರಣ ಅವರನ್ನು ಇನ್ನಷ್ಟು ಕಂಗೆಡಿಸಲಿದೆ. ದರ್ಶನ್‌ ಅವರಿಗೆ ನಂಜನಗೂಡು ಕ್ಷೇತ್ರ ಟಿಕೆಟ್‌ ನೀಡಲಾಗಿದ್ದು, ಅವರು ಚುನಾವಣಾ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಈ ವೇಳೆ ಮನೆಯಲ್ಲಿ ಸಾವು ಸಂಭವಿಸಿದೆ.

Join Whatsapp