ಬಂಟ್ವಾಳ: ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮ| ಫಲಾನುಭವಿಯ ಪರ್ಸನ್ನೇ ಎಗರಿಸಿದ ಖದೀಮರು!

Prasthutha|

ಬಂಟ್ವಾಳ: ವಿಕಲಚೇತನರಿಗೆ ದ್ವಿಚಕ್ರವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯೋರ್ವಳ ಪರ್ಸ್ ಎಗರಿಸಿದ ಘಟನೆ ನಡೆದಿದೆ.

- Advertisement -

ಶಾಸಕರ ಕೈಯಿಂದ ದ್ವಿಚಕ್ರ ವಾಹನದ ಕೀಲಿ ಕೈಯನ್ನು ಪಡೆಯುವ ವೇಳೆ ವಿಟ್ಲ ಪಡ್ನೂರು ನಿವಾಸಿ ಫಲಾನುಭವಿ ಯಶೋಧ ಬಿ ಅವರ ಪರ್ಸ್ ಕಳ್ಳರಿಬ್ಬರು ಎಗರಿಸಿ ಪರಾರಿಯಾಗಿದ್ದಾರೆ. ಪರ್ಸ್ ನಲ್ಲಿ ನಗದು ಹಾಗೂ ATM ಕಾರ್ಡ್ ಇತ್ತು ಎಂದು ತಿಳಿದುಬಂದಿದೆ. 

ಇಬ್ಬರು ವ್ಯಕ್ತಿಗಳು ಪರ್ಸ್ ಕಳವು ಮಾಡುವ ದೃಶ್ಯ ಶಾಸಕರ ಕಚೇರಿ ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಪರ್ಸ್ ಇಲ್ಲಿನ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ಸಿಕ್ಕಿದ್ದು, ಅದರೊಳಗೆ ಇದ್ದ ನಗದು ಹಣ ಹಾಗೂ ಎ‌ಟಿ‌ಎಂ ಕಾರ್ಡ್ ಕಾಣೆಯಾಗಿದೆ. ಕಳ್ಳರಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp