ಪುನೀತ್ ನಿಧನ: ಬ್ಲೇಡ್ ನಿಂದ ಕೈ, ಎದೆ ಕೊಯ್ದುಕೊಂಡು ಅಭಿಮಾನಿ ಆತ್ಮಹತ್ಯೆಗೆ ಯತ್ನ

Prasthutha|

ಹೊಸಪೇಟೆಯಲ್ಲಿ ಕಾಲುವೆಗೆ ಹಾರಿ ಪ್ರಾಣಬಿಟ್ಟ ವೃದ್ಧ

- Advertisement -

ಚಾಮರಾಜನಗರ: ನಟ ಪುನೀತ್ ರಾಜಕುಮಾರ್ ನಿಧನದಿಂದ ತೀವ್ರ ಮನನೊಂದು ಅಭಿಮಾನಿಯೊಬ್ಬ ಬ್ಲೇಡ್ ನಿಂದ ಕೈ, ಎದೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರದ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.

ಗಣೇಶ್ (22) ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ.

- Advertisement -

ಅಪ್ಪು ಸಾವಿನ ಸುದ್ದಿ ಕೇಳಿದಾಗಿನಿಂದಲೂ ಬೇಸರಗೊಂಡಿದ್ದ ಗಣೇಶ್ ತೀರಾ ಮನನೊಂದಿದ್ದ. ಇಂದು ಮೊಬೈಲ್ ನಲ್ಲಿ ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದ ಗಣೇಶ್ ಏಕಾಏಕಿ ಬ್ಲೇಡ್ ನಿಂದ ಕೈ, ಎದೆ ಕೊಯ್ದುಕೊಂಡಿದ್ದಾರೆ. ಎಚ್ಚೆತ್ತ ಸ್ನೇಹಿತರು ಯಳಂದೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಇದಕ್ಕೂ ಮೊದಲು ಹೊಸಪೇಟೆಯಲ್ಲಿ ನಟ ಪುನೀತ್ ರಾಜಕುಮಾರ್ ನಿಧನದಿಂದ ತೀವ್ರ ಮನನೊಂದಿದ ಕಾಳಪ್ಪ ಎಂಬ ವೃದ್ಧ ಶುಕ್ರವಾರ ರಾತ್ರಿ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಾಳಪ್ಪ ಪುನೀತ್ ಅವರ ಅಪ್ಪಟ ಅಭಿಮಾನಿ. ಮಧ್ಯಾಹ್ನ ಟಿ.ವಿ.ಯಲ್ಲಿ ಪುನೀತ್ ಅವರ ನಿಧನದ ಸುದ್ದಿ ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನೀರು, ಆಹಾರ ಸೇವಿಸದೆ ಸಂಜೆವರೆಗೂ ಟಿ.ವಿ. ನೋಡುತ್ತ ಕುಳಿತಿದ್ದರು. ಸಂಜೆ ತೀವ್ರ ದುಃಖಿತರಾಗಿ ಕಾಲುವೆಗೆ ಜಿಗಿದಿದ್ದರು. ಸ್ಥಳೀಯರು ಗಮನಿಸಿ ಅವರನ್ನು ರಕ್ಷಿಸಿದ್ದರು. ಆದರೆ ತೀವ್ರ ದುಖಃ ದಿಂದ ಪುನಃ ರಾತ್ರಿ ಮನೆಯಿಂದ ಹೋಗಿ ಕಾಲುವೆಗೆ ಜಿಗಿದಿದ್ದಾರೆ.

Join Whatsapp