ಪಿ.ಎಸ್.ಐ ಹಗರಣ; ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Prasthutha|

ಕೊಪ್ಪಳ : ಪಿ.ಎಸ್.ಐ ಹಗರಣದಲ್ಲಿ ಕನಕಗಿರಿಯ ಶಾಸಕ ಬಸವರಾಜ್ ಧಡೆಸುಗೂರರ ಪಾತ್ರಧಾರಿಕೆ ಕಾಣುತ್ತಿದ್ದು ಅವರನ್ನು ಶೀಘ್ರ ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಇಂದು ನಗರದ ಗಂಜ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.

- Advertisement -

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್ ಮಾತನಾಡಿ ಪ್ರಸ್ತುತ ರಾಜ್ಯದಲ್ಲಿರುವ ಬಿಜೆಪಿ  ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ

- Advertisement -

ಪ್ರತಿ ಹಂತದಲ್ಲೂ ಪ್ರತಿ ಯೋಜನೆಯಲ್ಲೂ ಹಗರಣ ಮಾಡುವುದೇ ಈ ಸರ್ಕಾರದ ಸಾಧನೆಯಾಗಿದೆ ಪಿ.ಎಸ್.ಐ ಹಗರಣದ ಕುರಿತು ಶಾಸಕ ಬಸವರಾಜ್ ಧಡೆಸುಗೂರ ಫೋನ್ನಲ್ಲಿ ಮಾತನಾಡಿದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು ಈ ಹಗರಣದಲ್ಲಿ ಕನಕಗಿರಿಯ ಶಾಸಕರ ಪಾತ್ರ ಎದ್ದು ಕಾಣುತ್ತಿದೆ ಆದ ಕಾರಣ ಶಾಸಕರನ್ನು ಬಂಧಿಸಿ ತನಿಖೆಗೊಳಪಡಿಸಿದರೆ ಪಿಎಸ್ಐ ಹಗರಣದ ಕುರಿತಾದ ಇನ್ನಷ್ಟು ದಾಖಲೆಗಳು ಲಭ್ಯವಾಗಲಿದ್ದು, ಆದ ಕಾರಣ ಶೀಘ್ರವಾಗಿ ಶಾಸಕರನ್ನು ಬಂಧಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

 ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅತಿಕೂರ್ ರೇಹೇಮನ್, ಜಿಲ್ಲಾ ಸಮಿತಿ ಸದಸ್ಯರಾದ ಖದರ್ ಭಾಷಾ, ಸಾಹಿಲ್, ಫೈಸಲ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Join Whatsapp