ಪ್ರಚೋದನಾಕಾರಿ ಭಾಷಣ| ಹಿಂಜಾವೇ ಮುಖಂಡ ನರಸಿಂಹ ಮಾಣಿ ವಿರುದ್ಧ ದೂರು ದಾಖಲು

Prasthutha|

ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಹಿಂಜಾವೇ ಮುಖಂಡ ನರಸಿಂಹ ಮಾಣಿ ವಿರುದ್ಧ ಮಿತ್ತೂರಿನ ಪಾಟ್ರಕೋಡಿ ನಿವಾಸಿಗಳು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

ಹಿಂಜಾವೇ ಮುಖಂಡ ನರಸಿಂಹ ಮಾಣಿ, ಒಂದು ಸಮುದಾಯದ ವಿರುದ್ಧ ಪ್ರಚೋದನಾಕಾರಿಯಾಗಿ ಭಾಷಣವನ್ನು ಮಾಡಿ ಶಾಂತಿ, ಸೌಹಾರ್ದಕ್ಕೆ ಧಕ್ಕೆಯುಂಟು ಮಾಡಿದ್ದಾರೆ.

“ಪಾಟ್ರಕೋಡಿ ನಿವಾಸಿಗಳು ದೇಶದ್ರೋಹಿಗಳು, ದನ ಕಳ್ಳರು. ಪಾಟ್ರಕೋಡಿಯು ಮಿನಿ ಪಾಕಿಸ್ತಾನ” ಎಂಬ ಆರೋಪವನ್ನು‌ ಅವರು ಮಾಡಿದ್ದಾರೆ. ಆ ಮೂಲಕ ಅವರು ಸೌಹಾರ್ದದಲ್ಲಿರುವ ಪಾಟ್ರಕೋಡಿ ನಿವಾಸಿಗಳನ್ನು ಧರ್ಮದ ಆಧಾರದಲ್ಲಿ ಪರಸ್ಪರ ಎತ್ತಿ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ನರಸಿಂಹ ಮಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಟ್ರಕೋಡಿ ನಿವಾಸಿಗಳು ದೂರಿನಲ್ಲಿ ಒತ್ತಾಯಿಸಿದ್ದಾರೆ.

Join Whatsapp