ಲಿಂಗಸುಗೂರು: ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Prasthutha|

ಲಿಂಗಸುಗೂರು: ದೇಶದಲ್ಲಿ ಕೋಮುವಾದಿ ಶಕ್ತಿಗಳು ದ್ವೇಷ ಮುಂದುವರೆಸುವ ಭಾಗವಾಗಿ ಅಲ್ಪ ಸಂಖ್ಯಾತ ಸಮುದಾಯಗಳ ಮೇಲೆ ನಡೆಸುತ್ತಿರುವ ಸುಳ್ಳು ಆರೋಪ ಹಾಗೂ ದೌರ್ಜನ್ಯವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ತಾಲೂಕು ಸಂಚಾಲಕ ರಮೇಶ ವೀರಾಪೂರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.

- Advertisement -


ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು. ಅವರ ಮೇಲೆ ಕೋಮು ಹಿಂಸಾಚಾರ ನಿಲ್ಲಿಸಲು ಸರಕಾರ ಕಠಿಣ ಕ್ರಮಕೈಗೊಳ್ಳಬೇಕು. ಕೋಮು ಹಿಂಸಾಚಾರದಲ್ಲಿ ಒಳಗಾದ ಎಲ್ಲರಿಗೂ ಪರಿಹಾರ ಹಾಗೂ ಪ್ರಾಣ ಕಳೆದುಕೊ೦ಡ ಕುಟುಂಬಗಳಿಗೆ ಸರಕಾರಿ ನೌಕರಿ ಒದಗಿಸಬೇಕು. ಡಾ. ರಾಜೇಂದ್ರ ಸಹಚರ ಸಮಿತಿ ಶಿಫಾರಸ್ಸಿನಂತೆ ಅಲ್ಪಸಂಖ್ಯಾತರ ಆರ್ಥಿಕ ಮತ್ತು ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರ ಸಮಗ್ರ ಯೋಜನೆ ರೂಪಿಸಬೇಕು. ರಾಜ್ಯ ಸರಕಾರ ನಿಲ್ಲಿಸಿರುವ ವಿದ್ಯಾರ್ಥಿ ವೇತನ ಪುನ ಆರಂಭಿಸಬೇಕು. ಜಾನುವಾರು ಹತ್ಯೆ ನಿಷೇಧ ಕಾಯಿದೆ 2020 ಕೂಡಲೆ ವಾಪಸ ಪಡೆಯಬೇಕು. ಖುರೇಷಿಗಳಿಗೆ ಪರಿಹಾರ ನೀಡಬೇಕು, ಹೊಸ ಉದ್ಯೋಗಕ್ಕೆ ಆರ್ಥಿಕ ಸಹಾಯ ಒದಗಿಸಬೇಕು ಎ೦ದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮುಖಂಡ ಮುಹಮ್ಮದ್ ಹನೀಫ್ ಸದ್ದಾಮ ಹುಸೇನ್, ಜಾಫರ್ .ಅನೀಸ್ ಪಾಷಾ, ಮುಹಮ್ಮದ್ ಛಾವೂಸ, ಫಯಾಝ್ ಅಹ್ಮದ್ , ಖಾಲಿದ್ ಛಾವೂಸ. ಉಮರ್. ತಿಪ್ಪಣ್ಣ ಪ್ರಭುಲಿಂಗ ಮೇಗಳಮನಿ. ಅನಿಲ್ ಕುಮಾರ, ಆಂಜನೇಯ ಮತ್ತಿತರರು ಭಾಗವಹಿಸಿದ್ದರು.

Join Whatsapp