ಗಣರಾಜ್ಯವನ್ನು ರಕ್ಷಿಸಿ ಘೋಷವಾಕ್ಯದಲ್ಲಿ ಪಾಪ್ಯುಲರ್ ಫ್ರಂಟ್ ಡೇ ಆಚರಣೆ, ರಕ್ತದಾನ ಶಿಬಿರ

Prasthutha|

ಫರಂಗಿಪೇಟೆ: ಗಣರಾಜ್ಯವನ್ನು ರಕ್ಷಿಸಿ ಎಂಬ ಘೋಷ ವಾಕ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಸಂಸ್ಥಾಪನಾ ದಿನಾಚರಣೆಯನ್ನು ಫರಂಗಿಪೇಟೆಯಲ್ಲಿ ಆಚರಿಸಲಾಯಿತು.

- Advertisement -

ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯ ಅಧ್ಯಕ್ಷ ಖಾದರ್ ಕುಂಪನಮಜಲ್ ಧ್ವಜಾರೋಹಣಗೈದರು. ತಾಲೂಕು ಅಧ್ಯಕ್ಷ ಸಲೀಮ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಪರ್ಲಿಯಾ ಸಂದೇಶ ನೀಡಿದರು.

ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ಡಿವಿಜನ್ ಅಧ್ಯಕ್ಷ ನಝೀರ್ ಕುಂಜತ್ಕಳ, ಎಸ್ ಡಿಟಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಸಂಗಬೆಟ್ಟು ಬ್ಲಾಕ್ ಅಧ್ಯಕ್ಷ ಸುಲೈಮಾನ್ ಉಸ್ತಾದ್, ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್, ಕಾರ್ಯದರ್ಶಿ ಶಾಫಿ ಲೀಡರ್ ಅಮೆಮಾರ್, ಕುಂಪನಮಜಲ್ ಬ್ರಾಂಚ್ ಅಧ್ಯಕ್ಷ ಮರ್ಝುಕು ಮತ್ತಿತರರು ಉಪಸ್ಥಿತರಿದ್ದರು. ಹಮೀದ್ ಕುಂಪನಮಜಲ್ ಸ್ವಾಗತಿಸಿ ನಿರೂಪಿಸಿದರು.

- Advertisement -

ಬಳಿಕ ಪಾಪ್ಯುಲರ್ ಫ್ರಂಟ್ ಬ್ಲಡ್ಡ್ ಡೋನರ್ಸ್ ಫೋರಂ ಫರಂಗಿಪೇಟೆ ಘಟಕ ಹಾಗೂ ರೆಡ್ ಕ್ರಾಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು

Join Whatsapp