ಸಿದ್ದರಾಮಯ್ಯಗೆ ಶುಭಕೋರುವ ಇಂಗ್ಲಿಷ್ ಪೋಸ್ಟರ್ ಕಿತ್ತೆಸೆದ ಕನ್ನಡ ಪರ ಸಂಘಟನೆ

Prasthutha|

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭಕೋರುವ ಇಂಗ್ಲಿಷ್ ಪೋಸ್ಟರ್​ಗೆ ಕನ್ನಡ ಪರ ಸಂಘಟನೆಗಳು ಮಸಿ ಬಳಿದು ಕಿತ್ತೆಸೆದಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ಸಿದ್ದರಾಮಯ್ಯ ಅವರು ನಾಳೆ (ಮೇ 20) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕಾಗಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಬ್ಯಾನರ್​ಗಳನ್ನು ಹಾಕಿ ಶುಭಕೋರಲಾಗುತ್ತಿದೆ.

ಕೆಲವೆಡೆ ಸಿದ್ದರಾಮಯ್ಯಗೆ ಶುಭಕೋರುವ ಪೋಸ್ಟರ್​ಗಳನ್ನು ಇಂಗ್ಲಿಷ್​ನಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಪೋಸ್ಟರ್​ಗೆ ಮಸಿ ಬಳಿದು ಕಿತ್ತೆಸೆದಿದ್ದಾರೆ.

- Advertisement -

ಯುವ ಕಾಂಗ್ರೆಸ್​ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಫ್ರೀಡಂಪಾರ್ಕ್​ನಲ್ಲಿ​ ಹಾಕಿದ್ದ ಪೋಸ್ಟರ್​ಗೆ ಮಸಿ ಬಳಿದ ಕಾರ್ಯಕರ್ತರು ಕನ್ನಡ ಬಳಸಿ ಎಂದು ಪೋಸ್ಟರ್​ನಲ್ಲಿ ಬರೆದು ನಂತರ ಹರಿದು ಹಾಕಿದ್ದಾರೆ.

ಒಟ್ಟು ಎರಡು ಕಡೆಗಳಲ್ಲಿ ನಲಪಾಡ್ ಅವರು ಇಂಗ್ಲಿಷ್​ನಲ್ಲಿ ಶುಭಕೋರುವ ಪೋಸ್ಟರ್​ಗಳನ್ನು ಹಾಕಿದ್ದರು. ಈ ಎರಡು ಪೋಸ್ಟರ್​ಗಳಿಗೂ ಮಸಿ ಬಳಿದು ನಂತರ ಕಿತ್ತೆಸೆಯಲಾಗಿದೆ.

ಪೋಸ್ಟರ್​​ನಲ್ಲಿ ಕನ್ನಡ ಬಳಸದ ಹಿನ್ನೆಲೆ ಕನ್ನಡಾಭಿಮಾನಿಗಳು ಪೋಸ್ಟರ್​ಗೆ ಮಸಿ ಬಳಿದು ಹರಿದು ಹಾಕಿದ್ದಾರೆ ಎನ್ನಲಾಗುತ್ತಿದೆ.

Join Whatsapp